Advertisement

‘ಕೂತ್ಕೋಳಮ್ಮ ಸಾಕು…’: ಮಹಿಳೆ ವಿರುದ್ಧ ಸಿದ್ಧು ಗರಂ

09:55 AM Jan 28, 2019 | Team Udayavani |

ಮೈಸೂರು: ಜನರ ಸಮಸ್ಯೆ ಆಲಿಸುತ್ತಿದ್ದ ಸಂದರ್ಭದಲ್ಲಿ ತನ್ನ ಮಗನ ವಿರುದ್ಧ ದೂರು ನೀಡಿದ ಮಹಿಳೆಗೆ ಮಾಜೀ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎಲ್ಲರೆದುರಲ್ಲೇ ಆವಾಝ್ ಹಾಕಿದ ಘಟನೆ ನಡೆದಿದೆ.

Advertisement

ಸಭೆಯಲ್ಲಿ ಎದುರು ಕುಳಿತಿದ್ದ ಮಹಿಳೆ ತನ್ನ ಮಗ ಯತೀಂದ್ರ ವಿರುದ್ಧ ದೂರು ಹೇಳುತ್ತಿದ್ದ ಸಂದರ್ಭದಲ್ಲಿ ಆಕೆ ಒಂದು ಹಂತದಲ್ಲಿ ಎದುರಿಗಿದ್ದ ಮೇಜನ್ನು ಕುಟ್ಟಿ ಆಕ್ರೋಶಭರಿತರಾಗಿ ಮಾತನಾಡುತ್ತಿದ್ದರು. ಇದನ್ನು ಕಂಡು ಕೋಪಗೊಂಡ ಸಿದ್ಧರಾಮಯ್ಯನವರು ಆ ಮಹಿಳೆಯ ಕೈಯಲ್ಲಿದ್ದ ಮೈಕನ್ನು ಕಿತ್ತುಕೊಂಡು ‘ಕೂತ್ಕೋಳಮ್ಮ ಸಾಕು..ನನ್ನ ಮುಂದೇನೆ ಟೇಬಲ್ ಕುಟ್ಟುತ್ತೀಯಾ…ದೇಶಕ್ಕೆ ಅನ್ಯಾಯ ಮಾಡಿರೋ ತರ ಮಾತಾಡ್ತೀಯಲ್ಲಾ…?’ ಎಂದು ಗದರುತ್ತಿರುವ ವಿಡಿಯೋ ಇದೀಗ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next