Advertisement

ಅಂಥ ಮಾತುಗಳನ್ನು ಯಾರಾದ್ರು ಆಡ್ತಾರೇನ್ರಿ…

12:31 PM Oct 31, 2018 | Team Udayavani |

ಶಿವಮೊಗ್ಗ: ‘ಪುತ್ರ ಸಾವನ್ನಪ್ಪಿದ್ದು  ಸಿದ್ದರಾಮಯ್ಯ ಅವರಿಗೆ ದೇವರು ಕೊಟ್ಟ ಶಿಕ್ಷೆ’ ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಿಡಿ ಕಾರಿದ್ದಾರೆ.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ರೆಡ್ಡಿಗೆ ಸಂಸ್ಕೃತಿ ಇಲ್ಲ ಮನುಷ್ಯತ್ವವೂ ಇಲ್ಲ. ಯಾರಾದರೂ ಅಂಥಾ ಮಾತುಗಳನ್ನು ಆಡುತ್ತಾರಾ, ಸಾರ್ವಜನಿಕ ಜೀವನದಲ್ಲಿ ಇಂಥಹ ಮಾತುಗಳನ್ನು ಒಪ್ಪಿಕೊಳ್ಳುವುದಕ್ಕೆ ಆಗುತ್ತಾದಾ’ ಎಂದು ಪ್ರಶ್ನಿಸಿದರು. 

‘ರಾಜಕಾರಣದಲ್ಲಿ ಟೀಕೆ ಟಿಪ್ಪಣಿ ಸರಿ ಆದರೆ ಕುಟುಂಬದ ವಿಚಾರ ಮಾತನಾಡುವುದು ಸರಿಯಲ್ಲ’ ಎಂದರು. 

‘ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತು ರಿಪಬ್ಲಿಕ್‌ ಆಫ್ ಬಳ್ಳಾರಿ ಆಗಿದೆ ವರದಿ ನೀಡಿದ್ದು ಫ್ಯಾಕ್ಟ್ ಅಲ್ವಾ’ಎಂದು ಪ್ರಶ್ನಿಸಿದರು. 

‘ಜನಾರ್ದನ ರೆಡ್ಡಿ ಏನು ರಾಜಮನೆತನದಿಂದ ಬಂದವರಾ, ಮಗಳ ಮದುವೆ ಹೇಗೆ ಮಾಡಿದ್ರು, ದುಡ್ಡು ಎಲ್ಲಿಂದ ಬಂತು, 40 ವರ್ಷಗಳಿಂದ ಮೈಸೂರಿನಲ್ಲಿ ನನಗೆ ಒಂದು ಮನೆ ಕಟ್ಟಲು ಸಾಧ್ಯವಾಗಿರಲಿಲ್ಲ’ ಎಂದು ಕಿಡಿ ಕಾರಿದರು. 

Advertisement

‘ಬಿ.ವೈ. ರಾಘವೇಂದ್ರ  ಗೆದ್ದ ಬಳಿಕ ಸರ್ಕಾರ ಬದಲಾಗುತ್ತದಾ, ಬಿಜೆಪಿಯವರ ಬಳಿ ಏನು ಮಂತ್ರ ದಂಡವಿದೆಯಾ’ ಎಂದು ಪ್ರಶ್ನಿಸಿದರು. 

ಬಿಎಸ್‌ವೈ ಅವರಿಗೆ ಸಿಎಂ ಕುರ್ಚಿ ಕನಸಲ್ಲಿ ಬರುತ್ತದೆ ಎಂದು ಲೇವಡಿ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next