Advertisement

ಸಿದ್ದರಾಮಯ್ಯ ದಡ್ಡರಂತೆ ವರ್ತಿಸುತ್ತಿದ್ದಾರೆ: ಸಿ.ಟಿ.ರವಿ

11:06 PM Jun 03, 2019 | Team Udayavani |

ಚಿಕ್ಕಮಗಳೂರು: “ಜನಾಭಿಪ್ರಾಯದ ಮೇಲೆ ನಂಬಿಕೆ ಇಲ್ಲದಿರುವ ಹೇಡಿ ಮನೋಭಾವದವರು ಮಾತ್ರ ಇವಿಎಂ ಕುರಿತು ಆರೋಪಿಸುತ್ತಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ. ರವಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಪುನಃ ಇವಿಎಂ ಕುರಿತು ದೂರಿದ್ದಾರೆ. ಅವರು ಇಷ್ಟೊಂದು ದಡ್ಡರೆ? ಅವರು ಒರಟರು ಎಂಬುದು ತಿಳಿದಿತ್ತು. ಸಮಾಜ ಅವರ ಒರಟುತನವನ್ನು ಒಪ್ಪಿಕೊಂಡಿದೆ. ಆದರೆ ಸಮಾಜ ದಡ್ಡತನವನ್ನು ಎಂದೂ ಒಪ್ಪುವುದಿಲ್ಲ ಎಂದರು. ಚುನಾವಣೆಯಲ್ಲಿ ಸೋತ ಕೂಡಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಾರೆ.

ಇವಿಎಂಗಳಿಗೆ ಆನ್‌ಲೈನ್‌ ಸಂಪರ್ಕವೇ ಇಲ್ಲ. ಹೀಗಿದ್ದ ಮೇಲೆ ಹ್ಯಾಕ್‌ ಮಾಡಲು ಹೇಗೆ ಸಾಧ್ಯ. ಅಷ್ಟರ ಮೇಲೂ ಇವಿಎಂ ಮೇಲೆ ಅನುಮಾನವಿದ್ದಲ್ಲಿ 45 ದಿನಗಳ ಒಳಗಾಗಿ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ. ಅಲ್ಲಿ ಪ್ರಶ್ನಿಸುವುದನ್ನು ಬಿಟ್ಟು ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next