Advertisement

ಸಚಿವ ಅಶ್ವತ್ಥ ನಾರಾಯಣ ಮನುಷ್ಯರೋ? ರಾಕ್ಷಸರೋ?

12:28 AM Feb 16, 2023 | Team Udayavani |

ಬಾಗಲಕೋಟೆ: ಅಶ್ವತ್ಥ ನಾರಾಯಣ ಉನ್ನತ ಶಿಕ್ಷಣ ಸಚಿವರಾಗಿದ್ದಾರೆ. ಆದರೆ, ಅವರ ಬಾಯಲ್ಲಿ ಬರುವ ಮಾತುಗಳನ್ನು ನೋಡುತ್ತಿದ್ದರೆ ಅವರು ಮನುಷ್ಯರೋ, ರಾಕ್ಷಸರೋ ಎನ್ನುವುದು ತಿಳಿಯುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Advertisement

ಜಿಲ್ಲೆಯ ಕಲಾದಗಿಯಲ್ಲಿ ಸಚಿವ ಅಶ್ವತ್ಥ ನಾರಾಯಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು ನಾನು ಟಿಪ್ಪುವನ್ನು ಗೌರವಿಸುತ್ತೇನೆ, ಸಂತ ಸೇವಾಲಾಲ್‌ ಅವರನ್ನೂ ಗೌರವಿಸ್ತೇನೆ, ರಾಣಿ ಚನ್ನಮ್ಮನವರನ್ನೂ ಗೌರವಿಸುತ್ತೇನೆ.

ಬಸವಣ್ಣನವರನ್ನೂ ಗೌರವಿಸುತ್ತೇನೆ. ಹಿಂದೂಗಳನ್ನು ಪ್ರೀತಿಸುತ್ತೇನೆ, ಕ್ರಿಶ್ಚಿಯನ್‌ರನ್ನು ಪ್ರೀತಿಸುತ್ತೇನೆ, ಮುಸ್ಲಿಮರನ್ನೂ ಪ್ರೀತಿಸ್ತೀನಿ ಎಂದು ಪ್ರತಿಕ್ರಿಯಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next