Advertisement

Siddapura; ಪಾದಚಾರಿಗೆ ಸ್ಕೂಟಿ ಢಿಕ್ಕಿ ಹೊಡೆಸಿದ ಸವಾರ ಪರಾರಿ

11:27 PM Jan 15, 2024 | Team Udayavani |

ಸಿದ್ದಾಪುರ: ಹೈಕಾಡಿ ಖಾಜಿ ಶಬ್ಬೀರ್‌ (69) ಅವರು ಹೈಕಾಡಿಯ ಮನೆ ಬಳಿ ರಸ್ತೆಯ ಪಕ್ಕದಲ್ಲಿ ನಿಂತಿರುವಾಗ ಸ್ಕೂಟಿ ಸವಾರ ಅತೀ ವೇಗವಾಗಿ ಬಂದು ಢಿಕ್ಕಿ ಹೊಡೆಸಿ, ವಾಹನವನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ.

Advertisement

ಢಿಕ್ಕಿಯ ಪರಿಣಾಮ ಖಾಜಿ ಶಬ್ಬೀರ್‌ ಗಂಭೀರವಾಗಿ ಗಾಯಗೊಂಡು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪುತ್ರ ಖಾಜಿ ಅಫ್ಜಲ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next