Advertisement

ಸಿದ್ದಾಪುರ: ಜನೌಷಧ ಕೇಂದ್ರ ಉದ್ಘಾಟನೆ

12:30 AM Feb 23, 2019 | |

ಸಿದ್ದಾಪುರ: ಉಡುಪಿ ಜಿಲ್ಲಾ ತೋಟಗಾರಿಕೆ ಬೆಳೆಗಾರರ ಸಹಕಾರಿ ಸಂಘದ ವತಿಯಿಂದ ಸಿದ್ದಾಪುರ ಡಾ| ಚಂದ್ರಮೌಳಿ ಕಾಂಪ್ಲೆಕ್ಸ್‌ನಲ್ಲಿ ಜನೌಷಧ ಕೇಂದ್ರ ಉದ್ಘಾಟನೆಗೊಂಡಿತು.

Advertisement

ಭಾರತೀಯ ರೆಡ್‌ಕ್ರಾಸ್‌ ಸೊಸೈಟಿಯ ಅಧ್ಯಕ್ಷ  ಜಯಕರ ಶೆಟ್ಟಿ ಕೇಂದ್ರ ಕೇಂದ್ರವನ್ನು ಉದ್ಘಾಟಿಸಿ, ಜನೌಷಧಿ ಕೇಂದ್ರದಲ್ಲಿ ಔಷಧ ಅತಿ ಕಡಿಮೆ ದರದಲ್ಲಿ ಸಿಗುತ್ತಿದ್ದರೂ, ಇದು ಎಲ್ಲ ರೀತಿಯ ಪ್ರಯೋಗಾಲಯದಲ್ಲಿ ಪರೀಕ್ಷಿಸಿ ಬಂದಿರುವ ಔಷಧವಾಗಿದ್ದು ಜನರಿಗೆ ಕಡಿಮೆ ದರದಲ್ಲಿ ಇದು ಸಿಗಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರಕಾರ  ಇದನ್ನು ಜಾರಿಗೆ ತಂದಿದೆ ಎಂದರು.

ಅಮಾಸೆಬೈಲು ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ ಎ.ಜಿ. ಕೊಡ್ಗಿ ಅವರು ಔಷಧಾಲಯ ಉದ್ಘಾಟಿಸಿದರು.ವಂಡ್ಸೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ   ಮಂಜಯ್ಯ ಶೆಟ್ಟಿ, ಕುಂದಾಪುರ ಟಿ.ಎ.ಪಿ.ಸಿ.ಎಂ.ಎಸ್‌. ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಬಿದ್ಕಲ್‌ಕಟ್ಟೆ, ಜಿ. ಪಂ. ಸದಸ್ಯ ರೋಹಿತ್‌ಕುಮಾರ ಶೆಟ್ಟಿ, ತಾ.ಪಂ. ಸದಸ್ಯ ಎಸ್‌.ಕೆ. ವಾಸುದೇವ ಪೈ, ಸಿದ್ದಾಪುರ ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಶೆಟ್ಟಿ, ಉಪಾಧ್ಯಕ್ಷ ಭರತ್‌ ಕಾಮತ್‌, ಕ್ಯಾಂಪ್ಕೋ   ನಿರ್ದೇಶಕ ಕಿಶೋರ ಕುಮಾರ ಕೊಡ್ಗಿ, ಸಂಘದ ಅಧ್ಯಕ್ಷ ಎ. ಅಶೋಕ ಕುಮಾರ ಕೊಡ್ಗಿ ಹಾಗೂ  ನಿರ್ದೇಶಕರು ಮತ್ತು ಸಿಬಂದಿ ಉಪಸ್ಥಿತರಿದ್ದರು.ಸಂಘದ ನಿರ್ದೇಶಕ ಕೆ. ಪ್ರದೀಪ ಹೆಬ್ಟಾರ್‌ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next