Advertisement

ವರ ಹುಡುಕಿ ಕೊಡುವುದಾಗಿ ಹೇಳಿ ಸಹೋದರಿಯಿಂದ ಲಕ್ಷಾಂತರ ರೂ. ವಂಚನೆ

10:59 PM Apr 10, 2023 | Team Udayavani |

ಸಿದ್ದಾಪುರ: ಬೆಳ್ವೆ ಗ್ರಾಮದ ಗುಮ್ಮಲ ಸರೋಜಾ ಅವರಿಗೆ ಮದುವೆಯಾಗಲು ಹುಡುಗನನ್ನು ಹುಡುಕಿ ಕೊಡುವುದಕ್ಕೆ ಎಂದು ಸಹೋದರಿ ಸವಿತಾ ಅವರು ಸುಮಾರು 13,59,500 ರೂ. ಹಣ ಪಡೆದು ಮೋಸ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

ಸವಿತಾ ಅವರು ತನ್ನ ಅಕ್ಕ ಸರೋಜಾ ಅವರಿಗೆ ಹುಡುಗನ್ನು ಹುಡುಕಿ ಕೊಡುವುದಕ್ಕಾಗಿ ಕಿರಣ್‌ ಮತ್ತು ಶ್ರೀನಿವಾಸ ಅವರೊಂದಿಗೆ ಸೇರಿ ಪದೇ ಪದೆ ಹಣ ಪಡೆದುಕೊಳ್ಳುತ್ತಿದ್ದರು. ಸರೋಜಾ ಸಹೋದರಿಯ ಮಾತಿಗೆ ಮರುಳಾಗಿ ತನ್ನ ಬ್ಯಾಂಕ್‌ ಖಾತೆಯಿಂದ 13,59,500 ರೂ. ಹಣ ವರ್ಗಾಯಿಸಿದ್ದರು.

ಜತೆಗೆ ಸುಮಾರು 3 ಲಕ್ಷ ರೂ. ಮೌಲ್ಯದ ಚಿನ್ನದ ಬಳೆ ಮತ್ತು ನೆಕ್ಲೇಸ್‌ ಸರವನ್ನು ಮದುವೆ ಸಮಾರಂಭಕ್ಕೆ ಹೋಗುವುದಕ್ಕಾಗಿ ಪಡೆದುಕೊಂಡು ಹಿಂದಿರುಗಿಸದೆ ಮೋಸ ಮಾಡಿದ್ದಾರೆ. ಚಿನ್ನವನ್ನು ಮೂಲ್ಕಿಯ ವಿಜಯ ಬ್ಯಾಂಕ್‌ನಲ್ಲಿ ಅಡವು ಇರಿಸಿದ್ದಾರೆ. ಹಣ ಮತ್ತು ಚಿನ್ನವನ್ನು ಹಿಂದಿರುಗಿಸುವಂತೆ ಕೇಳಿದಾಗ ಸಹೋದರಿ ಸವಿತಾ, ಕಿರಣ್‌ ಹಾಗೂ ಶ್ರೀನಿವಾಸ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಸರೋಜಾ ಅವರು ದೂರಿನಲ್ಲಿ ತಿಳಿಸಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next