Advertisement

Siddapura: ನೂಜಿನಬೈಲಿನಲ್ಲಿ ಹಲ್ಲೆ; ದೂರು ಪ್ರತಿದೂರು

09:44 PM Aug 23, 2024 | Team Udayavani |

ಸಿದ್ದಾಪುರ: ಉಳ್ಳೂರು-74 ಗ್ರಾಮದ ನೂಜಿನಬೈಲು ವಿಜಯ (23) ಅವರು ನ.21ರಂದು ನಂದಿಕೇಶ್ವರ ದೇವಸ್ಥಾನದ ಬಳಿ ರಿಕ್ಷಾ ಪಲ್ಟಿಯಾಗಿದ್ದನ್ನು ನೋಡಲು ಹೋದಾಗ ಗಣೇಶ ಎಂಬುವವರೊಂದಿಗೆ ಜಗಳವಾಗಿತ್ತು. ರಾತ್ರಿ ಸೇತುವೆ ಬಳಿ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಮಧ್ಯಾಹ್ನ ನಡೆದ ಜಗಳವನ್ನು ಮುಂದಿಟ್ಟು ನಾಗರಾಜ, ನಾಗೇಂದ್ರ, ಗಣೇಶ ಮತ್ತು ಮನು ಅವರು 3 ಬೈಕ್‌ಗಳಲ್ಲಿ ಬಂದು ಹಲ್ಲೆ ನಡೆಸಿದ್ದಾರೆ ಎಂದು ವಿಜಯ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Advertisement

ಪ್ರತಿದೂರು
ಪಲ್ಟಿಯಾದ ರಿಕ್ಷಾದ ಚಾಲಕ ದಿನೇಶ್‌ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಸ್ನೇಹಿತ ನಾಗರಾಜ ಜತೆಗೆ ಮನೆಗೆ ಮರಳುತ್ತಿದ್ದಾಗ ನೂಜಿನಬೈಲು ಸೇತುವೆ ಬಳಿ ವಿಜಯ ಹಾಗೂ ಉಲ್ಲಾಸ ತಮ್ಮ ಬೈಕನ್ನು ತಡೆದು ತನಗೂ ಹಾಗೂ ಸ್ನೇಹಿತ ನಾಗರಾಜ್‌ಗೆ ಹಲ್ಲೆ ನಡೆಸಿದ್ದಾರೆ ಎಂದು ಗಣೇಶ (22) ಅವರು ಪ್ರತಿದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next