Advertisement

BSY ಗೆ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬೊಮ್ಮಾಯಿ ತರುವರೇ ? : ಸಿದ್ದು ಲೇವಡಿ

11:25 AM Jul 31, 2021 | Team Udayavani |

ಮೈಸೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಯಲ್ಲೇ ಕೇಂದ್ರದಿಂದ ಪರಿಹಾರ ತರಲು ಆಗಲಿಲ್ಲ, ಇನ್ನು ಬಸವರಾಜ ಬೊಮ್ಮಾಯಿ ತರುವರೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕೊರೋನ ಮೂರನೇ ಅಲೆ ಭೀತಿ ಶುರುವಾಗಿದೆ, ನೆರೆ ಹಾವಳಿ ಕೂಡ ಹೆಚ್ಚಾಗಿದೆ, ಇದನ್ನೆಲ್ಲಾ ಬೊಮ್ಮಾಯಿ ನಿಭಾಯಿಸುವ ವಿಶ್ವಾಸ ನಮಗಿಲ್ಲ ಎಂದಿದ್ದಾರೆ. ಆಯಾಯಾ ಜಿಲ್ಲೆಯ ಅಧಿಕಾರಿಗಳು ನೆರೆ ಹಾವಳಿಯನ್ನ ನಿಭಾಯಿಸುತ್ತಾರೆ. ಅವರನ್ನು ಸಿಎಂ ವಿಶ್ವಾಸಕ್ಕೆ ಪಡೆದು ಕೆಲಸ ಮಾಡಬೇಕು ಎಂದರು.

ಏಕವ್ಯಕ್ತಿ ಸಂಪುಟದಿಂದ ಇವೆಲ್ಲವನ್ನ ನಿರ್ವಹಿಸಲು ಸಾಧ್ಯವಿಲ್ಲ, ಆದಷ್ಟು ಬೇಗ ಸಂಪುಟ ರಚನೆಯನ್ನೂ ಮಾಡಬೇಕು ಎಂದರು.

ಇದನ್ನೂ ಓದಿ :ಮಲೆನಾಡಿನಲ್ಲಿ ದನಗಳ್ಳರ ಹಾವಳಿ: ಮಲಗಿದ್ದ ದನಗಳನ್ನು ಕಾರಿಗೆ ತುಂಬಿಸಿಕೊಂಡು ಎಸ್ಕೇಪ್!

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next