Advertisement

ನಾನು ಥಿಯೇಟರ್ ಗೆ ಹೋದವನಲ್ಲ, ಅಪ್ಪು ಹೇಳಿದ್ರಿಂದ ಆ ಸಿನಿಮಾವನ್ನು ನೋಡಿದೆ : ಸಿದ್ದರಾಮಯ್ಯ

03:25 PM Dec 13, 2021 | Team Udayavani |

ಬೆಳಗಾವಿ : ಸುವರ್ಣಸೌಧದಲ್ಲಿ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದ್ದು, ಈ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಪುನೀತ್ ರಾಜ್ ಕುಮಾರ್‍ ಅವರನ್ನು ನೆನಪಿಸಿಕೊಂಡಿದ್ದಾರೆ.

Advertisement

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಾನು ಮೈಸೂರಿನಲ್ಲಿ ಥಿಯೇಟರ್ ಗೆ ಹೋದವನಲ್ಲ. ಆದ್ರೆ ಪುನೀತ್ ರಾಜ್ ಕುಮಾರ್ ಹೇಳಿದ್ರು ಅಂತ ಥಿಯೇಟರ್ ಗೆ ಹೋಗಿ ರಾಜಕುಮಾರ ಸಿನಿಮಾವನ್ನು ನೋಡಿದೆ.

ಅಪ್ಪು ನನ್ನನ್ನು ಯಾವಾಗಲು ಮಾಮ ಎಂದು ಕರೆಯುತ್ತಿದ್ದು, ಹೀಗೆ ಒಮ್ಮೆ ಸಿಕ್ಕಾಗ ಮಾಮ ನೀನು ರಾಜಕುಮಾರ ಸಿನಿಮಾವನ್ನು ನೋಡಬೇಕು ಎಂದಿದ್ದರು. ಈ ಕಾರಣದಿಂದ ಚಿತ್ರ ಮಂದಿರಕ್ಕೆ ಹೋಗಿ ಸಿನಿಮಾ ನೋಡಿದ್ದೆ ಎಂದು ಸಿದ್ದರಾಮಯ್ಯ ಪುನೀತ್ ನೆನಪನ್ನು ಮೆಲುಕು ಹಾಕಿಕೊಡಿದ್ದಾರೆ.

ಪುನೀತ್ ರಾಜ್ ಕುಮಾರ್ ಬಹಳ ಅದ್ಭುತವಾಗಿ ನಟನೆ ಮಾಡುತ್ತಿದ್ದ ವ್ಯಕ್ತಿ. ಅದು ಅವರಿಗೆ ಚಿಕ್ಕವಯಸ್ಸಿನಲ್ಲೇ ರಕ್ತಗತವಾಗಿ ಬಂದಿತ್ತು. ಇದೆಲ್ಲದಿಕ್ಕಿಂತ  ಮುಖ್ಯವಾಗಿ ಪುನೀತ್ ರಾಜ್ ಕುಮಾರ್ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಿದ್ದರು. ಸರ್ಕಾರದ ಅನೇಕ ಇಲಾಖೆಗಳಿಗೆ ರಾಯಭಾರಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ.

ತಂದೆಯ ಎಲ್ಲಾ ಗುಣಗಳನ್ನು ಅಳವಡಿಸಿಕೊಂಡ ವ್ಯಕ್ತಿಯನ್ನು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲ ಸಮಾಜ ಕೂಡ ಅಂತಹ ಅಪರೂಪದ ವ್ಯಕ್ತಿಯನ್ನ ಕಳೆದುಕೊಂಡಿದೆ. ಅವರ ಆತ್ಮಕ್ಕೆ ಚಿರ ಶಾಂತಿ ದೊರಕಲಿ ಎಂದು ಕಲಾಪದ ವೇಳೆ ಪುನೀತ್ ಅವರನ್ನು ನೆನೆದು ಭಾವುಕರಾದರು.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next