Advertisement

ಕೋರ್ಟ್‌ ಆವರಣದಲ್ಲಿ ಕತ್ತಿ ಝಳಪಿಸಿ ಜಡ್ಜ್ ಕುರ್ಚಿಯಲ್ಲಿ ಕುಳಿತ ರೌಡಿ

05:20 PM Oct 02, 2018 | Team Udayavani |

ಶಿವಗಂಗಾ, ತಮಿಳು ನಾಡು : 24ರ ಹರೆಯದ ರೌಡಿಯೋರ್ವ ಕೋರ್ಟ್‌ ಆವರಣದಲ್ಲಿ ಕತ್ತಿ ಝಳಪಿಸಿ ಅಲ್ಲಿದ್ದವರಿಗೆ ಜೀವ ಬೆದರಿಕೆ ಹಾಕಿ ಬಳಿಕ ಅಲ್ಲಿಂದ ನೇರವಾಗಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟರ ಸ್ಥಾನದೆಡೆಗೆ ಧಾವಿಸಿ ಅವರ ಕುರ್ಚಿಯ ಮೇಲೆ ಕುಳಿತು ಘೋಷಣೆ ಕೂಗಿದ ಘಟನೆ ನಡೆದಿದೆ. ಪೊಲೀಸರು ಕೂಡಲೇ ಆರೋಪಿಯನ್ನು ಬಂಧಿಸಿದ್ದಾರೆ. ಆತನು ಮತಿ ಭ್ರಮಿತನೆಂದು ಗೊತ್ತಾಗಿದೆ. 

Advertisement

ಬಂಧಿತ ಮತಿ ಭ್ರಮಿತ ಆರೋಪಿಯನ್ನು ಮುನ್ಸಾಮಿ ಎಂದು ಗುರುತಿಸಲಾಗಿದೆ. ರೌಡಿಯಿಸಂ ಗಾಗಿ ಆತನನ್ನು ಬಂಧಿಸಲಾಗಿತ್ತು. ಆತನಿಗೆ ಜಾಮೀನು ಕೂಡ ಸಿಕ್ಕಿತ್ತು. 

ಜಾಮೀನು ಸಿಕ್ಕೊಡನೆಯೇ ಆತ ಮೊದಲು ನೇರವಾಗಿ ದೇವಸ್ಥಾನಕ್ಕೆ ಧಾವಿಸಿ ಅಲ್ಲಿ ಕತ್ತಿ ಝಳಪಸಿ ಭಕ್ತಾದಿಗಳಿಗೆ ಬೆದರಿಕೆ ಹಾಕಿದ್ದ. ಅವನ ಅವೇಶ ನೋಡಿದ ಭಕ್ತರ ಬೆಚ್ಚಿ ಬಿದ್ದಿದ್ದರು. 

ಬಳಿಕ ಅಲ್ಲಿಂದ ಆತ ಕೋರ್ಟ್‌ ಆವರಣದೆಡೆಗೆ ಬಂದು ಕತ್ತಿ ಝಳಪಿಸುತ್ತಾ ಎಲ್ಲರಿಗೂ ಪ್ರಾಣ ಬೆದರಿಕೆ ಒಡ್ಡಿದ. ಅನಂತರ  ಮ್ಯಾಜಿಸ್ಟ್ರೇಟರ ಸೀಟಿನಲ್ಲಿ  ಕೂತ ಆತನನ್ನು  ಪೊಲೀಸರು ಕೂಡಲೇ ಆತನನ್ನು ಬಂಧಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next