Advertisement
ಕಳೆದ ಒಂದು ತಿಂಗಳಿಂದ ಪಟೇಲರ ಮೀಸಲಿಗೆ ಸಂಬಂಧಿಸಿ ಮೀಸಲು ಹೋರಾಟಗಾರರ ಜತೆ ಮಾತುಕತೆ ನಡೆಸುವಲ್ಲಿ ಸಿಬಲ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಈಗ ಅಯೋಧ್ಯೆ ವಿವಾದದಿಂದಾಗಿ ಅವರು ಗುಜರಾತ್ನಿಂದ ದೂರವುಳಿಯಬೇಕಾದ ಸ್ಥಿತಿ ಬಂದಿದೆ.
Related Articles
Advertisement
ಸಿಬಲ್ ಸುನ್ನಿ ಮಂಡಳಿಯನ್ನು ಪ್ರತಿನಿಧಿಸಿದ್ದು ಹೌದಾ?: ಅಯೋಧ್ಯೆ ವಿಚಾರಣೆ ವೇಳೆ ಸಿಬಲ್ ನಿಜವಾಗಿಯೂ ಪ್ರತಿನಿಧಿಸಿದ್ದು ಯಾರನ್ನು ಎಂಬ ಪ್ರಶ್ನೆ ಇದೀಗ ಮೂಡಿದೆ. ಸುನ್ನಿ ವಕ್ಫ್ ಮಂಡಳಿಯನ್ನು ಪ್ರತಿನಿಧಿಸಿದ್ದರು ಎಂದು ಪ್ರಧಾನಿ ಮೋದಿ, ಅಮಿತ್ ಶಾ ಮತ್ತಿತರರು ಆರೋಪಿಸಿ ದ್ದರು. ಅದನ್ನು ಸಿಬಲ್ ಅಲ್ಲಗಳೆದಿದ್ದರು. ಸುನ್ನಿ ಮಂಡಳಿಯೂ, ನಾವು ಸಿಬಲ್ಗೆ ವಿಚಾರಣೆ ಮುಂದೂಡುವಂತೆ ಕೋರಿ ಎಂದು ಹೇಳಿರಲಿಲ್ಲ ಎಂದಿತ್ತು. ಇದೀಗ ಈ ಕುರಿತ ಸ್ಪಷ್ಪನೆ ಸಿಕ್ಕಿದೆ. ಸುಪ್ರೀಂ ಕೋರ್ಟ್ನಲ್ಲಿ ದಾಖಲಾದ ಮಾಹಿತಿ ಪ್ರಕಾರ, ಸಿಬಲ್ ಅವರು 2894, 7226, 4192 ಹಾಗೂ 8096 ಸಂಖ್ಯೆಯ ಅರ್ಜಿದಾರರನ್ನು ಪ್ರತಿನಿಧಿಸುತ್ತಿದ್ದಾರೆ. ಈ ಪೈಕಿ 4192 ಸಂಖ್ಯೆಯು ಸುನ್ನಿ ವಕ್ಫ್ ಮಂಡಳಿಯದ್ದು. ಹಾಗಾಗಿ, ಅವರನ್ನು ಸಿಬಲ್ ಪ್ರತಿನಿಧಿಸುತ್ತಿರುವುದು ಸ್ಪಷ್ಟ. ಆದರೆ, ಮಂಗಳವಾರ ಸುಪ್ರೀಂ ಹೊರಡಿಸಿರುವ ಆದೇಶದ ಪ್ರತಿಯಲ್ಲಿ, “2894 ಮತ್ತು 2011 ಅನ್ನು ಪ್ರತಿನಿಧಿಸಿದ ಸಿಬಲ್’ ಎಂಬ ಪ್ರಸ್ತಾವವಿದೆ. ಅಂದರೆ, ಮಂಗಳವಾರದ ವಿಚಾರಣೆ ವೇಳೆ ಸಿಬಲ್ ಅವರು ಸುನ್ನಿ ಮಂಡಳಿಯ ಪರ ವಾದ ಮಂಡಿಸಿಲ್ಲ ಎಂದು ಅರ್ಥ. ಹಾಗಿದ್ದರೆ, ಅಂದು ಮಂಡಳಿಯನ್ನು ಯಾರೂ ಪ್ರತಿನಿಧಿಸಿಯೇ ಇಲ್ಲವೇ ಎಂಬ ಪ್ರಶ್ನೆಯೂ ಈಗ ಮೂಡಿದೆ.
“ಟೋಪಿ ಹಾಗೂ ಗಡ್ಡಧಾರಿ'(ಮುಸ್ಲಿಮರು)ಗಳ ಜನಸಂಖ್ಯೆ ಇಳಿಸಬೇಕಾದ ಆವಶ್ಯಕತೆಯಿದೆ. ನಾನಿಲ್ಲಿ ಬಂದಿದ್ದೇ ಭಯ ಹುಟ್ಟಿಸಲು. ಯಾರಾದರೂ ಕೋಮುಗಲಭೆಗೆ ಪ್ರಚೋದಿಸಿದರೆ ಸುಮ್ಮನೆ ಬಿಡಲ್ಲ.ಶೈಲೇಶ್ ಸೊತ್ತಾ, ಬಿಜೆಪಿ ಅಭ್ಯರ್ಥಿ