Advertisement

ಕೆಲಸ ಕಳೆದುಕೊಂಡ ವೃದ್ಧೆಗೆ ಎಸ್‌ಐ ಉಮೇಶ್‌ ನೆರವು

10:10 AM Jun 20, 2020 | mahesh |

ಪಣಂಬೂರು: ಲಾಕ್‌ಡೌನ್‌ ವೇಳೆ ನೌಕರಿ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿ ಮಂಗಳೂರಿಗೆ ಬಂದಿದ್ದ ಮಹಿಳೆಯ ಪ್ರಯಾಣಕ್ಕೆ ಹಣ ನೀಡಿ ಪಣಂಬೂರಿನ ಎಸ್‌ಐ ಉಮೇಶ್‌ ಕುಮಾರ್‌ ಮಾನವೀಯತೆ ಮೆರೆದಿದ್ದಾರೆ.

Advertisement

ಮೂಲತಃ ಚಿಕ್ಕಮಗಳೂರಿನ ವಿಜಯಲಕ್ಷ್ಮೀ (59) ಉತ್ತರ ಭಾರತದ ಶಾಲೆಯೊಂದರಲ್ಲಿ ಉಪನ್ಯಾಸಕಿಯಾಗಿ ಇದ್ದರು. ಲಾಕ್‌ಡೌನ್‌ ಕಾರಣದಿಂದ ಅಲ್ಲಿಂದ ಊರಿಗೆ ಕಳುಹಿಸಿದ್ದರು. ಇದರಿಂದಾಗಿ ಚಿಕ್ಕಮಗಳೂರಿನಲ್ಲಿ ಯಾರೂ ಇಲ್ಲದ ಕಾರಣ ಈಕೆ ಧರ್ಮಸ್ಥಳಕ್ಕೆ ಆಗಮಿಸಿ, ಅಲ್ಲಿಂದ ಮಂಗಳೂರಿಗೆ ಬಂದಿದ್ದರು. ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಸಾರ್ವಜನಿಕರಲ್ಲಿ ತನಗೆ ಕೆಲಸ ಬೇಕೆಂದು ಕೇಳಿಕೊಂಡಾಗ ಅವರನ್ನು ಬೈಕಂಪಾಡಿಗೆ ಕಳುಹಿಸಿದ್ದರು. ಬೈಕಂಪಾಡಿಯಲ್ಲಿ ಯಾರೂ ಕೆಲಸ ನೀಡದಿದ್ದಾಗ ಸ್ಥಳೀಯರು ಪೊಲೀಸ್‌ ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿದರು.ಅಲ್ಲಿಂದ ಬಂದ ಮಾಹಿತಿ ಮೇರೆಗೆ ಎಸ್‌ಐ ಉಮೇಶ್‌ ಮತ್ತು ಸಿಬಂದಿ ಸ್ಥಳಕ್ಕೆ ಧಾವಿಸಿ ವಿಚಾರಿಸಿದರು. ಆಗ ಆಕೆ ನನಗೆ ಯಾರೂ ಕೆಲಸ ಕೊಡುವುದಿಲ್ಲ, ನನ್ನನ್ನು ಧರ್ಮಸ್ಥಳಕ್ಕೆ ಕಳುಹಿಸಿಕೊಡಿ ಎಂದು ಬೇಡಿಕೊಂಡಾಗ ಎಸ್‌ಐ ಉಮೇಶ್‌ ಕುಮಾರ್‌ ಅವರು ಬಸ್‌ ನಿಲ್ದಾಣಕ್ಕೆ ಬಿಟ್ಟು,ಬಸ್‌ಗೆ ಹಣ ನೀಡಿ ಕಳುಹಿಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next