Advertisement

ಬೇವಿನ ಮರದಲ್ಲಿ ಶುಕಮುನಿ ಸ್ವಾಮಿ ಚಿತ್ರ ಉದ್ಭವಿಸಿದ ವದಂತಿ :ಗ್ರಾಮಸ್ಥರಿಂದ ಮರಕ್ಕೆ ಪೂಜ

02:57 PM Sep 03, 2020 | sudhir |

ದೋಟಿಹಾಳ: ಪಕ್ಕದ ಕೇಸೂರ ಗ್ರಾಮದ ಹೊರ ವಲಯದಲ್ಲಿ ಬೇವಿನ ಮರದಲ್ಲಿ ದೋಟಿಹಾಳ ಗ್ರಾಮದ ಶುಕಮುನಿಸ್ವಾಮಿ ಉದ್ಭವಿಸಿದ್ದಾನೆ ಎಂಬ ವದಂತಿ ಅವಳಿ ಗ್ರಾಮದಲ್ಲಿ ಕಾಡಗಿಚಿನಂತೆ ಹರಡಿದ್ದು ಗ್ರಾಮಸ್ಥರು ತಂಡೋಪತಂಡವಾಗಿ ಸ್ಥಳಕ್ಕೆ ಭೇಟಿ ನೀಡುತ್ತಿರುವುದು ಕಂಡುಬರುತ್ತಿದೆ.

Advertisement

ದೋಟಿಹಾಳ ಗ್ರಾಮದ ಮಾಜಿ ಶಾಸಕ ಹಸನಸಾಬ್‌ ದೋಟಿಹಾಳ ಅವರ ಹೊಲದ ಬದುವಿನಲ್ಲಿ ಇರುವ ಬೇವಿನ ಮರದಲ್ಲಿ ಶುಕಮುನಿಸ್ವಾಮಿ ಪಲ್ಲಕ್ಕಿ ಸಿಂಹದ ಮುಖದ ಆಕಾರದ ರೀತಿಯಲ್ಲಿ ಇರುವ ಚಿತ್ರ ಕಾಣುತ್ತಿದೆ ಎಂದು ಯಾರೊ ಹೇಳಿದ್ದರು.

ಹೀಗಾಗಿ ಅವಳಿ ಗ್ರಾಮಗಳ ಗ್ರಾಮಸ್ಥರು ಮತ್ತು ಸುತ್ತಮುತ್ತ ಹಳ್ಳಿಗಳ ಜನರು ಅದನ್ನು ನೋಡಲು ತಂಡೋಪತಂಡವಾಗಿ ಆಗಮಿಸಿ ಗಿಡಕ್ಕೆ ಪೂಜೆ ಸಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next