Advertisement

ಶುಭೇಂದ್ರರಾವ್‌ ಸಿತಾರ್‌ ಮುರಿದ ಏರಿಂಡಿಯಾ

12:35 PM Nov 03, 2019 | Team Udayavani |

ಮುಂಬಯಿ: ಭಾರತದ ಖ್ಯಾತ ಸಿತಾರ್‌ ವಾದಕ ಶುಭೇಂದ್ರ ರಾವ್‌ ಅವರು ಏರ್‌ಇಂಡಿಯಾ ತಮ್ಮ ಸಿತಾರ್‌ ಮುರಿದು ಹಾಕಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ. ಏರಿಂಡಿಯಾ ಸಿಬಂದಿಗೆ ಸಂಗೀತ ಪರಿಕರವನ್ನು ಎಷ್ಟು ಸೂಕ್ಷ್ಮವಾಗಿ ನಿರ್ವಹಿಸಬೇಕು ಎಂದು ತಿಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದಿರುವ ಅವರು, “ನನ್ನ ಸಿತಾರನ್ನು ಮತ್ತೂಮ್ಮೆ ಹಾನಿಗೀಡು ಮಾಡಲಾಗಿದೆ. ಈ ಬಾರಿ ಅದಕ್ಕೆ ಹಾನಿ ಮಾಡಿದ್ದು ನಮ್ಮ ಏರ್‌ಇಂಡಿಯಾ ಸಿಬಂದಿ. ಕಾರ್ಯಕ್ರಮವೊಂದರ ಸಲುವಾಗಿ ನ್ಯೂಯಾರ್ಕ್‌ಗೆ ಬಂದಿಳಿದೆ. ನೋಡುವಾಗ, ಸಿಬಂದಿ ಇದನ್ನು ಮಧ್ಯ ಸೀಳುವಂತೆ ಮುರಿದುಹಾಕಿದ್ದಾರೆ’ ಎಂದು ಅವರು ಬರೆದಿದ್ದಾರೆ. ಜೊತೆಗೆ ಚೇಂಜ್‌ ಆರ್ಗ್‌ನಲ್ಲಿ ವಿಮಾನ ಸಿಬಂದಿ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಲೂ ಮುಂದಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next