Advertisement

ಶೃತಿ ತಪ್ಪಿಸಿದ್ದು ಆರೆಸ್ಸೆಸ್‌-ಜೋಶಿ: ಹುಣಸಿಮರದ

11:56 AM Apr 29, 2019 | Team Udayavani |

ಧಾರವಾಡ: ಜಿಲ್ಲೆಯ ಕೆಲವು ರಾಜಕಾರಣಿಗಳಿಂದ ವೀರಶೈವ- ಲಿಂಗಾಯತ ಧರ್ಮದಲ್ಲಿ ಒಡಕು ಮೂಡಿಸುವ ಕೆಲಸ ಆಗುತ್ತಿದ್ದು, ಒಡೆದಾಳುವ ಕೆಲಸ ನಿಲ್ಲಿಸದೇ ಹೋದರೆ ಲಿಂಗಾಯತ ಸಮಾಜವೇ ಅವರಿಗೆ ತಕ್ಕ ಪಾಠ ಕಲಿಸಲಿದೆ ಎಂದು ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಗುರುರಾಜ ಹುಣಸಿಮರದ ಎಚ್ಚರಿಕೆ ನೀಡಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶೃತಿ ಬೆಳ್ಳಕ್ಕಿ ಲಿಂಗಾಯತ ಸಮಾಜದವಳಾಗಿದ್ದು, ಅವಳ ಬಗ್ಗೆ ನಮಗೆ ಅಪಾರ ಗೌರವವಿದೆ. ಆದರೆ ಅವಳ ದಿಕ್ಕು ತಪ್ಪಿಸಿರುವ ಬಿಜೆಪಿ ಹಾಗೂ ಆರೆಸ್ಸೆಸ್‌ ಅವಳ ಮೂಲಕ ವೀರಶೈವ-ಲಿಂಗಾಯತ ಧರ್ಮ ಒಡೆದಾಳುವ ಕಾರ್ಯಕ್ಕೆ ಮುಂದಾಗಿದೆ. ಈ ಕಾರ್ಯಕ್ಕೆ ಶಾಸಕ ಅರವಿಂದ ಬೆಲ್ಲದ ಸಹ ಕೈ ಜೋಡಿಸಿದ್ದು ಸರಿಯಲ್ಲ. ಲಿಂಗಾಯತ ಸಮಾಜದಿಂದಲೇ ಬಂದಿರುವ ಬೆಲ್ಲದ ಈ ಬಗ್ಗೆ ಅರಿತು ನಡೆಯಬೇಕು ಎಂದರು.

ಲಿಂಗಾಯತ ಸಮಾಜದಿಂದಲೇ ಶಾಸಕರಾಗಿರುವ ಅರವಿಂದ ಬೆಲ್ಲದ ಪಕ್ಷಗಿಂತಲೂ ಮೊದಲು ಸಮಾಜ ನೋಡಬೇಕು. ಆದರೆ ಸಮಾಜದಲ್ಲಿ ಒಡಕು ಮೂಡಿಸುತ್ತಿರುವವರ ಕೈಗೊಂಬೆಯಾಗಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಮುಂದಾದರೆ ಅದಕ್ಕೆ ತಕ್ಕ ಪಾಠ ಕಲಿಯಬೇಕಾಗುತ್ತದೆ. ಈ ಬಗ್ಗೆ ಅವರನ್ನು ಸಮಾಜದಿಂದ ಬಹಿಷ್ಕಾರ ಮಾಡಬೇಕೊ? ಅಥವಾ ಅವರ ವಿರುದ್ದ ಹೋರಾಟ ಮಾಡಬೇಕೆಂಬ ಬಗ್ಗೆ ಸಮಾಜವೇ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಾಗರಾಜ ಪಟ್ಟಣಶೆಟ್ಟಿ, ಮಲ್ಲನಗೌಡ ಪಾಟೀಲ, ಎಂ.ಎಫ್‌. ಹಿರೇಮಠ, ಎಸ್‌.ಜಿ. ಪೂಜಾರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next