Advertisement

ಶ್ರೀರಾಮ್‌ ಮಹಾಜನ್‌ಅವರಿಗೆ ರಾಜ್ಯಮಟ್ಟದ ಪ್ರಶಸಿ

06:28 PM Jan 26, 2020 | Suhan S |

ಮುಂಬಯಿ, ಜ. 25: ಚೆಂಬೂರು ಕರ್ನಾಟಕ ಸಂಘ ಸಂಚಾಲಿತ ಚೆಂಬೂರು ಕರ್ನಾಟಕ ಹೈಸ್ಕೂಲ್‌ರ ಕಲಾ ಶಿಕ್ಷಕರಾದ ಶ್ರೀರಾಮ್‌ ಮಹಾಜನ್‌ ಅವರಿಗೆ ಸಾಯಿ ಅರ್ಪಣಾ ಫೌಂಡೇಷನ್‌ ಆಯೋಜಿಸಿದ ಮಹಾರಾಷ್ಟ್ರ ಸಮ್ಮಾನ್‌ ಪ್ರಶಸ್ತಿ ಲಭಿಸಿದೆ.

Advertisement

ಜ. 9 ರಂದು ಶಿರ್ಡಿಯ ಜೆ. ಕೆ. ಪಾಲೇಸ್‌ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಹಾಜನ್‌ ಅವರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಮಾಜ ಸೇವಕ ಸೋಮನಾಥ ಗಾಯಕ್ವಾಡ್‌ ಅವರು ಈ ಪ್ರಶಸ್ತಿಯನ್ನು ಪ್ರಧಾನಿಸಿದರು. ಪ್ರಶಸ್ತಿಯು ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿತ್ತು. ಮಹಾಜನ್‌ ಅವರು ಚಿತ್ರಕಲಾ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಯಿತು. ಮಹಾಜನ್‌ ಅವರ ಸಾಧನೆಗೆ ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ, ನ್ಯಾಯವಾದಿ ಎಚ್‌. ಕೆ. ಸುಧಾಕರ, ಶಾಲೆಯ ಮುಖ್ಯ ಶಿಕ್ಷಕ ರಾಜಿ ರಮೇಶ್‌ ಹಾಗೂ ಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next