Advertisement
ಉತ್ತರಾದಿ ಮಠಾಧೀಶ ಶ್ರೀ ಸತ್ಯಾತ್ಮತೀರ್ಥರಿಂದ ಅ.19ರ ವರೆಗೆ ನವರಾತ್ರಿ ಕಾರ್ಯಕ್ರಮ ನಡೆಯುತ್ತಿವೆ. ಅ.16, 17, 18 ರಂದು ಶ್ರೀ ಸತ್ಯಪರಾಕ್ರಮ ತೀರ್ಥರ ಆರಾಧನಾ ಮಹೋತ್ಸವ ನಡೆಯಲಿದ್ದು, 19ರಂದು ಮಧ್ವ ಜಯಂತಿ ಆಚರಣೆ ನಡೆಯಲಿದೆ.
ಶ್ರೀಸತ್ಯಾತ್ಮತೀರ್ಥರ ಪಾದ ಪೂಜೆಗೆ ಅವಕಾಶ ನೀಡಲಾಗಿದೆ. ನಂತರ ದಂಡೋದಕ ಸ್ನಾನ, ಪೂಜೆ, ಪ್ರವಚನ ನಡೆಯುತ್ತಿವೆ. ತದನಂತರ ಬಂದ ಭಕ್ತ ಸಮೂಹಕ್ಕೆ ಮುದ್ರಾಧಾರಣೆ ಕಾರ್ಯಕ್ರಮ ನಡೆಯುತ್ತಿವೆ. ರಾಯಚೂರು ಸೇರಿದಂತೆ ನೆರೆಯ ಜಿಲ್ಲೆಗಳ ನೂರಾರು ಭಕ್ತರು ಭಾಗವಹಿಸುತ್ತಿದ್ದಾರೆ. ಶ್ರೀ ಸತ್ಯಪರಾಕ್ರಮತೀರ್ಥರ ಮೂಲ ವಂಶಸ್ಥರಾದ ಜಹಾಗೀರದಾರ ವಂಶಜರು ಭಕ್ತರಿಗೆ ಸೌಲಭ್ಯ ಒದಗಿಸಿದ್ದಾರೆ.