Advertisement

Sandalwood; ಒಂದ್ಸಲ ಮೀಟ್‌ ಮಾಡೋಣ ಎಂದ ಶ್ರೇಯಸ್- ಬೃಂದಾ

05:16 PM Sep 07, 2023 | Team Udayavani |

ಹಿರಿಯ ನಿರ್ದೇಶಕ ಎಸ್‌. ನಾರಾಯಣ್‌ ಸದ್ದಿಲ್ಲದೆ ಹೊಸ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳು ತಯಾರಾಗಿದ್ದಾರೆ.ಈ ಬಾರಿ ಟ್ರಾವೆಲ್‌ ಲವ್‌ ಸ್ಟೋರಿಯೊಂದನ್ನು ಆರಿಸಿಕೊಂಡಿರುವ ಎಸ್‌. ನಾರಾಯಣ್‌ ತಮ್ಮ ಸಿನಿಮಾಕ್ಕೆ “ಒಂದ್ಸಲ ಮಿಟ್‌ ಮಾಡೋಣ’ ಎಂದು ಟೈಟಲ್‌ ಇಟ್ಟಿದ್ದಾರೆ.

Advertisement

ಇನ್ನು ಈ ಸಿನಿಮಾದಲ್ಲಿ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್‌ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ “ಒಂದ್ಸಲ ಮಿಟ್‌ ಮಾಡೋಣ’ ಸಿನಿಮಾದ ಬಹುತೇಕ ಪ್ರೀ-ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ ಎಸ್‌. ನಾರಾಯಣ್‌ ಆ್ಯಂಡ್‌ ಟೀಮ್‌ ಇತ್ತೀಚೆಗೆ ಸಿನಿಮಾದ ಮುಹೂರ್ತವನ್ನು ನೆರವೇರಿಸಿದ್ದಾರೆ.

ಚಿಕ್ಕಮಗಳೂರಿನ ಶ್ರೀದೇವಿರಮ್ಮ ದೇವಸ್ಥಾನದಲ್ಲಿ ನಡೆದ “ಒಂದ್ಸಲ ಮಿಟ್‌ ಮಾಡೋಣ’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಸಿನಿಮಾದ ಮೊದಲ ಸನ್ನಿವೇಶಕ್ಕೆ ಸ್ಥಳೀಯ ಶಾಸಕರಾದ ಹೆಚ್‌. ಡಿ ತಮ್ಮಯ್ಯ ಆರಂಭ ಫ‌ಲಕ ತೋರಿದರು. ನಿರ್ಮಾಣ ಸಹಾಯಕ ಮಹದೇವ ಕ್ಯಾಮೆರಾ ಚಾಲನೆ ಮಾಡಿದರು.

ಮುಹೂರ್ತ ಸಮಾರಂಭದಲ್ಲಿ ನಾಯಕ ನಟ ಶ್ರೇಯಸ್‌ ಮಂಜು, ನಿರ್ದೇಶಕ ಎಸ್‌. ನಾರಾಯಣ್‌, ನಟಿ ತಾರಾ ಅನುರಾಧ ಸೇರಿದಂತೆ ಚಿತ್ರದ ಕಲಾವಿದರು ತಂತ್ರಜ್ಞರು ಹಾಜರಿದ್ದರು.

“ಈಶಾ ಪ್ರೊಡಕ್ಷನ್ಸ್‌’ ಲಾಂಛನದಲ್ಲಿ ಕೆ. ಮಂಜು ಹಾಗೂ ರಮೇಶ್‌ ಯಾದವ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ “ಒಂದ್ಸಲ ಮಿಟ್‌ ಮಾಡೋಣ’ ಸಿನಿಮಾಕ್ಕೆ ಎಸ್‌. ನಾರಾಯಣ್‌ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

Advertisement

ಸಿನಿಮಾದಲ್ಲಿ ಶ್ರೇಯಸ್‌ಗೆ ಬೃಂದಾ ನಾಯಕಿಯಾಗಿ ಜೋಡಿಯಾಗುತ್ತಿದ್ದಾರೆ. ಉಳಿದಂತೆ ತಾರಾ ಅನುರಾಧ, ಶರತ್‌ ಲೋಹಿತಾಶ್ವ, ಸಾಧುಕೋಕಿಲ, ಪ್ರಮೋದ್‌ ಶೆಟ್ಟಿ, ಕಲ್ಯಾಣಿ, ರಂಗಾಯಣ ರಘು, ಪಾವಗಡ ಮಂಜು, ಜಯರಾಮ್‌, ಸುಜಯ್‌ ಶಾಸ್ತ್ರಿ, ಗಿರಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. “ಒಂದ್ಸಲ ಮಿಟ್‌ ಮಾಡೋಣ’ ಸಿನಿಮಾದ ಹಾಡುಗಳಿಗೆ ಜಸ್ಸಿ ಗಿಫ್ಟ್ ಸಂಗೀತ ಸಂಯೋಜಿಸುತ್ತಿದ್ದು, ಕುಮಾರ್‌ ಗೌಡ ಛಾಯಾಗ್ರಹಣ, ಶಿವಪ್ರಸಾದ್‌ ಯಾದವ್‌ ಸಂಕಲನವಿದೆ.

“ಒಂದ್ಸಲ ಮೀಟ್‌ ಮಾಡೋಣ’ ಪ್ರೀತಿಯ ಜರ್ನಿ ಎಂದು ಹೇಳುವ ನಿರ್ದೇಶಕ ಎಸ್‌. ನಾರಾಯಣ್‌, “ಚಿಕ್ಕಮಗಳೂರಿನಿಂದ ಚಿತ್ರೀಕರಣ ಪ್ರಾರಂಭವಾಗಿ, ಸಕಲೇಶಪುರ, ವಿರಾಜಪೇಟೆ, ಕಣ್ಣೂರು, ಮೈಸೂರು, ಬೆಂಗಳೂರು, ಬೆಳಗಾವಿ ಹಾಗೂ ಗೋವಾ ಮುಂತಾದ ಕಡೆ ನಡೆಯಲಿದೆ. ಇದೊಂದು ಟ್ರಾವೆಲಿಂಗ್‌ ಲವ್‌ ಸ್ಟೋರಿ’ ಎಂದು ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next