Advertisement

Udupi ಶ್ರೀಕೃಷ್ಣ ಜನ್ಮಾಷ್ಟಮಿ ಸಂದೇಶ : ಶ್ರೀಕೃಷ್ಣನ ಉಪದೇಶದಂತೆ ಸ್ವಾಸ್ಥ್ಯ-ಸಾಮರಸ್ಯ

12:55 AM Sep 06, 2023 | Team Udayavani |

“ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ ಎನ್ನುವುದು ಶ್ರೀಕೃಷ್ಣನ ಸಿದ್ಧ ಸಂಕಲ್ಪ. ಧರ್ಮ-ಅಧರ್ಮ, ದುಷ್ಟ- ಶಿಷ್ಟ ಮುಂತಾದವು ಎಲ್ಲ ಕಾಲದಲ್ಲಿ ಇರುತ್ತವೆ. ಅಧರ್ಮ ಅಂದರೆ ದುಷ್ಟ ಶಕ್ತಿಯು ವ್ಯಾಪಕವಾಗಿ ಉಲ್ಬಣಗೊಳ್ಳುವುದು. “ಧರ್ಮ’ ಅಂದರೆ ಸಾತ್ವಿಕ ಶಕ್ತಿಯ ಉಚ್ಛಾಯ.

Advertisement

ಅಧರ್ಮಾನುಷ್ಠಾನದಿಂದ ಸಜ್ಜನರು ಕ್ಷೇಶಪಡುತ್ತಾರೆ. ಸಮಾಜದಲ್ಲಿ ದುಷ್ಟರು-ವಂಚಕರು ಬಲಿಷ್ಠರಾದರೆ ಸ್ವಾಸ್ಥ್ಯ, ಸಾಮರಸ್ಯ ಮರೀಚಿಕೆಯಾಗುತ್ತದೆ. ದುಷ್ಟರ ದೌರ್ಜನ್ಯದಿಂದ ಶಿಷ್ಟರು ಮೂಲೆಗುಂಪಾಗುತ್ತಾರೆ. ಅವರ ಸಚಿಂತನೆ, ಸದುಪದೇಶಾದಿಗಳು ಅನಾದರಗೊಳ್ಳುತ್ತವೆ. ಅವರ ಬದುಕಿಗೆ ನೆಲೆ ಇಲ್ಲವಾಗುತ್ತದೆ. ಧರ್ಮ ವಿರೂಪಗೊಳ್ಳು ತ್ತದೆ. ಅಧರ್ಮವೇ ಧರ್ಮವೆನ್ನುವ ಸೋಗಿನಲ್ಲಿ ತಾಂಡವವಾಡುತ್ತದೆ. ದುಷ್ಟಶಕ್ತಿಯ ದಮನ ಅನಿವಾರ್ಯವಾಗುತ್ತದೆ. ಸಜ್ಜನರೆಲ್ಲಾ ಈ ಅನಿಷ್ಟದಿಂದ ಮುಕ್ತರಾಗಲು ಮುಕುಂದನಿಗೆ ಮೊರೆಹೊಗುವುದು ಆವಶ್ಯಕ. ಕಲಿಯುಗದಲ್ಲಿ ಶ್ರೀಹರಿಯ ಅವತಾರವಿಲ್ಲ. ಆದರೆ ಆ ದೇವನ ಉಪದೇಶವೇ ಆತನ ಮೂರ್ತರೂಪದಂತಿದೆ. ಆ ಹಿತೋಪದೇಶದ ಮರ್ಮವರಿತು ಹಿತಸಾಧಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಶ್ರೀಕೃಷ್ಣ ಜಯಂತಿಯ ಈ ಸಮಯವು ಶ್ರೀ ಕೃಷ್ಣನ ದುಷ್ಟನಿಗ್ರಹ-ಶಿಷ್ಟಾನುಗ್ರಹ ಮಹಿಮೆಯನ್ನು ವಿಶೇಷವಾಗಿ ಸ್ಮರಣೆಗೆ ತಂದುಕೊಡುತ್ತದೆ. ಪ್ರಕೃತ, ಸಮಾಜದಲ್ಲಿಯ ದುಷ್ಟನಿಗ್ರಹಕ್ಕೆ ಶ್ರೀಕೃಷ್ಣನು ಉಪದೇಶದ ಮೂಲಕ ತೋರಿದ ಉಪಾಯವೇ ಎಲ್ಲ ರೀತಿಯಿಂದಲೂ ಉಪಾದೇಯವೆನಿಸಿದೆ.

ಲೋಕೋಪಕಾರಿ ಸತ್ಕರ್ಮವೂ ಭಗವತೂ³ಜೆ ಎಂದು ಅರಿತು, ನಿಸ್ವಾರ್ಥ ಬದುಕಿನಿಂದ ಸ್ವಾಸ್ಥ್ಯ-ಸಾಮರಸ್ಯ ಸಾಧಿಸಬೇಕಾಗಿದೆ. ಸಾಮಾಜಿಕ ಸ್ವಾಸ್ಥ್ಯ ದೇಶದ ಹಿತ (ಅಭಿವೃದ್ಧಿ) ಸಾಧಿಸುತ್ತದೆ ಎನ್ನುವಲ್ಲಿ ಎರಡು ಮಾತಿಲ್ಲ. ಇವೆಲ್ಲ ಸಾಧಿಸುವಂತಾಗಲೆಂದು ಶ್ರೀಕೃಷ್ಣನು ವಿಶೇಷವಾಗಿ ಅನುಗ್ರಹಿಸಲಿ.

– ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಪರ್ಯಾಯ ಶ್ರೀ ಕೃಷ್ಣಾಪುರ ಮಠ

Advertisement

Udayavani is now on Telegram. Click here to join our channel and stay updated with the latest news.

Next