Advertisement

ಶ್ರೀ ಕಾಳಿಕಾಂಬಾದೇವಿಯ ವಾರ್ಷಿಕೋತ್ಸವ

08:46 PM May 21, 2019 | sudhir |

ಶನಿವಾರಸಂತೆ: ಧಾರ್ಮಿಕ ಸಂಸ್ಕಾರವಂತಿಕೆಯಿಂದ ಸಮಾಜ ಸನ್ಮಾರ್ಗದಲ್ಲಿ ಸಾಗಲು ಸಾಧ್ಯವಾಗುತ್ತದೆ ಎಂದು ಅರಕಲಗೂಡು ಅರೆಮಾದನಹಳ್ಳಿ ಶ್ರೀವಿಶ್ವಕರ್ಮ ಜಗದ್ಗುರು ಸುಜ್ಞಾನ ಪ್ರಭುಪೀಠಾಧ್ಯಕ್ಷ ಶ್ರೀ ಶಿವಸುಜ್ಞಾನತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಅವರು ಸಮಿಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಶ್ರೀಕಾಳಿಕಾಂಬ ದೇವಿಯ 4 ವರ್ಷದ ವಾರ್ಷಿಕೋತ್ಸವ, ಸಾಮೂಹಿಕ ಉಪನಯನ ಮತ್ತು ಸಾಮೂಹಿಕ ಕುಂಕುಮಾರ್ಚನೆ ಹಾಗೂ ಪೂಜಾ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಆಶೀವರ್ಚನ ನೀಡುತ್ತಿದ್ದರು.

Advertisement

ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವಸ್ವಾಮೀಜಿ ಮಾತನಾಡಿದರು. ದೇವಾಲಯ ಸಮಿತಿ ಅಧ್ಯಕ್ಷ ಲಕ್ಷ್ಮಣಾ ಚಾರ್‌ ಮಾತನಾಡಿ, ವಿಶ್ವಕರ್ಮ ಸಮು ದಾಯದ ಅಭಿವೃದ್ಧಿªಗಾಗಿ ಸಮುದಾಯದ ವಿವಿಧ ಕುಲ ಬಾಂಧವರ ಸಹಕಾರ ಮತ್ತು ಪೋ›ತ್ಸಾಹದ ಅಗತ್ಯ ಇದೆ ಎಂದು ಮನವಿ ಮಾಡಿದರು.

ವಿಶ್ವಕರ್ಮ ಸಮುದಾಯದ ಪ್ರಮುಖ ರಾದ ಪುಟ್ಟಸ್ವಾಮಿಚಾರ್‌, ನ್ಯಾಯಾದೀಶ ನವಿನ್‌ಕುಮಾರ್‌, ವಿಶ್ವನಾಥ್‌ಚಾರ್‌, ವೀರಶೈವ ಮಹಾ ಸಭಾದ ಜಿಲ್ಲಾಧ್ಯಕ್ಷ ಕೆ.ಬಿ.ಹಾಲಪ್ಪ, ಕಿರಿಕೊಡ್ಲಿ ಮಠದ ಪರೋಹಿತ ಸೋಮಶೇಖರ್‌ ,ದೇವಾಲಯ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ದೇವಾಲಯದಲ್ಲಿ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಹೋಮ ಹವನ, ವಿವಿಧ ಪೂಜಾ ಕಾರ್ಯಕ್ರಮ ಮತ್ತು ಬ್ರಹ್ಮಪದೇಶ ನಡೆಯಿತು.

ಮಹಿಳೆಯರಿಂದ ದೇವಿಗೆ ಸಾಮೂಹಿಕ ಕುಂಕುಮಾರ್ಚನೆ, ಹಾಗೂ ಸಾಮೂಹಿಕ ಉಪನಯನ ನಡೆಯಿತು. ಮಹಾ ಮಂಗಳಾರತಿ ಪ್ರಸಾದ ವಿನಿಯೋಗದೊಂದಿಗೆ ಪೂಜ ಕಾರ್ಯಕ್ರಮ ಸಂಪನ್ನಗೊಂಡಿತು. ದೇವಾಲಯ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತು.

Advertisement

Udayavani is now on Telegram. Click here to join our channel and stay updated with the latest news.

Next