Advertisement

ದೈವೀ ಸಂಪತ್ತು ನಮ್ಮದಾಗಲಿ: ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

07:58 PM Jan 31, 2020 | Sriram |

ಕಟೀಲು: ಮಠ ಮಂದಿರಗಳಿಗೆ ಭೇಟಿ ನೀಡಿ ಪ್ರಾರ್ಥಿಸಿ ದೇವರ ಎದುರು ನಿರ್ದೋಷಿಗಳಾಗಬೇಕು. ಆ ಮೂಲಕ ದೈವೀ ಸಂಪತ್ತು ನಮ್ಮದಾಗಲಿ, ಅಸುರತ್ವ ದೂರವಾಗಲಿ ಎಂದು ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

Advertisement

ರವಿವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಭ್ರಾಮರೀ ಸಭಾಂಗಣದಲ್ಲಿ ಸಂಪನ್ನಗೊಂಡ ಐದನೇ ದಿನದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ನಮ್ಮ ಸನಾತನ ಪರಂಪರೆಯಲ್ಲಿ ಧರ್ಮವನ್ನು ರಕ್ಷಿಸಬೇಕಾದರೆ ದೇವತಾರಾಧನೆ ಅನೂಚಾನವಾಗಿ ನಡೆಯಬೇಕು. ದೇವಾಲಯಗಳು ಧರ್ಮಪ್ರಜ್ಞೆಯನ್ನು ಜಾಗೃತಗೊಳಿ
ಸುವ ಬಲು ದೊಡ್ಡ ಕೆಲಸ ಮಾಡುತ್ತಿವೆ ಎಂದು ಸ್ವಾಮೀಜಿ ನುಡಿದರು.

ಬೆಂಗಳೂರಿನ ಚಿಂತಕಿ ಅಮೃತಾ ಉಮೇಶ್‌ ಭಕ್ತಿ ಮತ್ತು ಆರಾಧನೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಮಂಗಳೂರು ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ವರದರಾಯ ನಾಗ್ವೇಕರ್‌ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯಕುಮಾರ ಸೊರಕೆ, ಕಾಸರಗೋಡು ಬೇಳ ಕುಮಾರಮಂಗಲ ದೇವಸ್ಥಾನದ ತಂತ್ರಿ ವಿಷ್ಣು ಆಸ್ರ, ಮಂಗಳೂರು ಸಹಾಯಕ ಆಯುಕ್ತ ಮದನ್‌ ಮೋಹನ್‌, ವಿಶ್ವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ , ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಕೆಮ್ಮಿಂಜೆ ನಾಗೇಶ ತಂತ್ರಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಸಂತ ಕೆದಿಲಾಯ, ಉಡುಪಿ ಸಾಯಿರಾಧ ಗ್ರೂಪ್‌ನಮುಖ್ಯಸ್ಥ ಮನೋಹರ ಶೆಟ್ಟಿ,ಮುಂಬಯಿ ಬಂಟರ ಅಸೋಸಿಯೇಶನ್‌ ಅಧ್ಯಕ್ಷ ಸುಭಾಸ್‌ ಶೆಟ್ಟಿ ಬಜಪೆ, ಬೆಂಗಳೂರಿನ ಉದ್ಯಮಿ ನೆಲಮಂಗಲ ಶ್ರೀನಿವಾಸ, ಮುಂಬಯಿಯ ಉದ್ಯಮಿ ಸಂಜೀವ ಶೆಟ್ಟಿ, ಕಸಾಪ‌ ಮಾಜಿ ರಾಜ್ಯ ಅಧ್ಯಕ್ಷ ಹರಿಕೃಷ್ಣ ಪುನರೂರು, ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಮೊಕ್ತೇಸರ ವಾಸುದೇವ ರಾವ್‌, ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ಮಂಗಳೂರು ಅತ್ತಾವರ ಚಕ್ರಪಾಣಿ ಗೋಪೀನಾಥ ದೇವಸ್ಥಾನದ ಗೌರವಾಧ್ಯಕ್ಷ ರತೀಂದ್ರನಾಥ್‌, ಉದ್ಯಮಿ ಶ್ರೀಪತಿ ಭಟ್‌, ಜೋತಿಷಿ ಮಧೂರು ರಂಗನಾರಾಯಣ ಭಟ್ಟ, ಸುಧೀರ್‌ ಶೆಟ್ಟಿ ಕೊಡೆತ್ತೂರುಗುತ್ತು, ಕಟೀಲುಗ್ರಾ.ಪಂ. ಅಧ್ಯಕ್ಷೆ ಗೀತಾ ಪೂಜಾರಿ¤ ಉಪಸ್ಥಿತರಿದ್ದರು. ಕಟೀಲು ದೇವಸ್ಥಾನದ ಅರ್ಚಕ ಶ್ರೀ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಿದ್ವಾನ್‌ ಪಂಜ ಭಾಸ್ಕರ ಭಟ್‌ ಮಾತನಾಡಿದರು. ಜಿ.ಪಂ. ಸದಸ್ಯ ಜರ್ನಾದನ ಗೌಡ ವಂದಿಸಿದರು. ರಾಜೇಂದ್ರ ಪ್ರಸಾದ್‌ ಎಕ್ಕಾರು ನಿರೂಪಿಸಿದರು.

ಧಾರ್ಮಿಕ ಕಾರ್ಯಕ್ರಮಗಳು
ಶ್ರೀ ದೇಗುಲದಲ್ಲಿ ರವಿವಾರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಧಾರಾಶುದ್ಧಿ-ಸಾಮವೇದ ಮತ್ತು ಅಥರ್ವವೇದ ಪಾರಾಯಣ, ಅವಗಾಹ ಮತ್ತು ಸೇಕ ಶುದ್ಧಿ, ರುದ್ರಯಾಗ, ಶಾಸ್ತ್ರ ಬಿಂಬಶುದ್ಧಿ, ಮನ್ಯುಸೂಕ್ತಹೋಮ, ಪಂಚ ದುರ್ಗಾ ಹೋಮ, ರಾತ್ರಿಸೂಕ್ತ ಹೋಮ, ಒಳಗಿನ ನಾಗ ಸನ್ನಿಧಿಯಲ್ಲಿ ಆಶ್ಲೇಷಾ ಬಲಿ ಜರಗಿದವು. ಭ್ರಾಮರೀವನದಲ್ಲಿ ಅಂಗಾರಕಯಾಗ, ಸಹಸ್ರ ಚಂಡಿಕಾ ಸಪ್ತಶತೀ ಪಾರಾಯಣ, ಕೋಟಿ ಜಪ ಯಜ್ಞ, ನವಗ್ರಹವನ, ರಾಶಿವನದಲ್ಲಿ ಆಯಾ ವೃಕ್ಷ ಗಳ ಸ್ಥಾಪನೆ ಜರಗಿತು. ಸಂಜೆ 5ರಿಂದ ವನದುರ್ಗಾ ಪೂಜೆ, ದುರ್ಗಾ ಮಾರ್ಕಂಡೇಯ ಪ್ರೋಕ್ತಪ್ರಾಯ ಶ್ಚಿತ್ತ ಹೋಮಗಳು, ಉತ್ಸವ ಬಲಿ, ಭ್ರಾಮರೀವನದಲ್ಲಿ ಕೋಟಿ ಜಪಯಜ್ಞ, ಸಹಸ್ರಚಂಡಿಕಾ ಸಪ್ತಶತೀ ಪಾರಾಯಣ ಜರಗಿದವು.

Advertisement

90 ಸಹಸ್ರ ಭಕ್ತರ ಭೇಟಿ
ರವಿವಾರ ರಜಾದಿನವಾಗಿದ್ದು ಸುಮಾರು 90 ಸಾವಿರಕ್ಕೂ ಅಧಿಕ ಜನರು ದೇವಸ್ಥಾನಕ್ಕೆ ಭೇಟಿ, ದೇವಿಯ ದರ್ಶನ ಪಡೆದರು. ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next