Advertisement

ಮಂಗಳೂರಿನಲ್ಲಿ ಹಳಿತಪ್ಪಿದ ಶ್ರಮಿಕ್ ಎಕ್ಸ್ ಪ್ರೆಸ್ ರೈಲು ಇಂಜಿನ್: ತಪ್ಪಿದ ಭಾರಿ ದುರಂತ

03:53 PM May 19, 2020 | keerthan |

ಮಂಗಳೂರು: ಕೆರಳದ ತ್ರಿಶ್ಯೂರ್ ನಿಂದ ಜೈಪುರ್ ಗೆ ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಶ್ರಮಿಕ್ ಎಕ್ಸ್ ಪ್ರೆಸ್ ರೈಲು ಇಂಜಿನ್ ಮಂಗಳೂರಿನಲ್ಲಿ ಸೋಮವಾರ ತಡರಾತ್ರಿ ಹಳಿತಪ್ಪಿದ್ದು, ಭಾರಿ ದುರಂತವೊಂದು ತಪ್ಪಿದೆ.

Advertisement

ಮಂಗಳೂರಿನ ಪಡೀಲ್ ನಲ್ಲಿ ಕಾರ್ಮಿಕರ ಪ್ರಯಾಣದ ರೈಲಿನ ಇಂಜಿನ್ ಹಳಿ ತಪ್ಪಿ ಬಿದ್ದಿದೆ. ಆದರೆ ಬೇರೆ ಯಾವುದೇ ಬೋಗಿಗೆ ಹಾನಿಯಾಗದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ಸೋಮವಾರ ತಡರಾತ್ರಿ ರಾತ್ರಿ ಎರಡು ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಆದರೆ ಮುಂಜಾನೆ ನಾಲ್ಕು ಗಂಟೆಯ ವೇಳೆ ಬದಲಿ ಇಂಜಿನ್ ವ್ಯವಸ್ಥೆ ಮಾಡಿ ಕಾರ್ಮಿಕರರ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಗಿದೆ.

ರೈಲ್ವೆ ಇಂಜಿನ್ ತೆರವು ಕಾರ್ಯ ಪ್ರಗತಿಯಲ್ಲಿದ್ದು, ಕ್ರೈನ್ ಮೂಲಕ ಕಾರ್ಯಾಚರಣೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next