Advertisement

ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಶ್ರದ್ಧಾಂಜಲಿ ಅರ್ಪಣೆ

05:31 PM Dec 30, 2019 | Suhan S |

ಮುಂಬಯಿ, ಡಿ. 29: ನಡೆದಾಡುವ ದೇವರು, ಕೋಟಿಗೊಬ್ಬ ಸನ್ಯಾಸಿಯಾಗಿದ್ದು ರವಿವಾರ ಮುಂಜಾನೆ ದೈವಕ್ಯರಾದ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ ಇಲ್ಲಿನ ಸಾಂತಾಕ್ರೂಜ್‌ ಪೂರ್ವದ ಪೇಜಾವರ ಮಠದಲ್ಲಿ ಶ್ರದ್ಧಾಂಜಲಿ ಪ್ರಾರ್ಥನೆ ಸಲ್ಲಿಸಲಾಯಿತು.

Advertisement

ಶ್ರೀಗಳ ತವರೂರು ರಾಮಕುಂಜ ಇಲ್ಲಿನ ಮಠದ ಪ್ರಬಂಧಕ ವಿದ್ವಾನ್‌ ಪ್ರಕಾಶ ಆಚಾರ್ಯ ಮತ್ತು ನಿರಂಜನ ಗೋಗಟೆ ನೇತೃತ್ವಲ್ಲಿ ಮಠದಲ್ಲಿನ ಶಿಲಾಮಯ ಮಂದಿರದ ಶ್ರೀ ಕೃಷ್ಣನ ಸನ್ನಿಧಿಯ ಮುಂಭಾಗ ಶ್ರೀಗಳ ಭಾವಚಿತ್ರವನ್ನು ಇರಿಸಿ ಪುಷ್ಪಾರ್ಚನೆಗೈದು ಸದ್ಗತಿ ಕೋರಿದರು. ಶ್ರೀಗಳ ಕೃಷ್ಣೈಕ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ಮಠದಲ್ಲಿ ಮೌನ ಆವರಿಸಿದ್ದು ಮಡುಗಟ್ಟಿದ ವಾತಾವಾರಣದಲ್ಲಿದ್ದ ಪುರೋಹಿತರು, ಶ್ರೀ ಗುರುಗಳ ಭಕ್ತರು, ಶಿಷ್ಯವೃಂದ ಮತ್ತು ಮಠದ ಕರ್ಮಚಾರಿಗಳು ಹಾಜರಿದ್ದು ಸಂತಾಪ ವ್ಯಕ್ತ ಪಡಿಸಿ, ಪುಷ್ಪನಮನ ಸಲ್ಲಿಸಿದರು.

 

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next