Advertisement

ಮೆಹ್ರೌಲಿ ಅರಣ್ಯದಲ್ಲಿ ಸಿಕ್ಕ ಮೂಳೆಗಳು ಶ್ರದ್ಧಾಳದ್ದೆ…ಡಿಎನ್‌ಎ ಪರೀಕ್ಷೆಯಲ್ಲಿ ಸಾಬೀತು!

03:44 PM Dec 15, 2022 | Team Udayavani |

ನವದೆಹಲಿ: ಕೆಲ ದಿನಗಳ ಹಿಂದೆ ದೆಹಲಿಯಲ್ಲಿ ತಲ್ಲಣ ಎಬ್ಬಿಸಿದ್ದ ಶ್ರದ್ದಾ ವಾಕರ್ ಹತ್ಯೆ ಪ್ರಕರಣದ ಕುರಿತು ಮಹತ್ವದ ವರದಿಯೊಂದು ಪೊಲೀಸರ ಕೈಸೇರಿದೆ.

Advertisement

ಶ್ರದ್ದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಕೈಗೆತ್ತಿಕೊಂಡ ಪೊಲೀಸರು ಶ್ರದ್ದಾ ಅವರ ದೇಹದ ಭಾಗಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ ಈ ವೇಳೆ ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಮಾನವ ದೇಹದ ಮೂಳೆಗಳು ಪತ್ತೆಯಾಗಿತ್ತು, ಇದರ ಡಿಎನ್ಎ ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಲಾಗಿತ್ತು ಅಲ್ಲದೆ ಶ್ರದ್ದಾ ಅವರ ತಂದೆಯ ಡಿಎನ್ಎ ಸ್ಯಾಂಪಲ್ ಲ್ಯಾಬ್ ಗೆ ಕಳುಹಿಸಿಕೊಡಲಾಗಿತ್ತು ಸದ್ಯ ಮೂಳೆಗಳ ಡಿಎನ್ಎ ವರದಿ ಪೊಲೀಸರ ಕೈ ಸೇರಿದ್ದು ಮೆಹ್ರೌಲಿ ಅರಣ್ಯ ಪ್ರದೇಶದಲ್ಲಿ ಸಿಕ್ಕ ಮೂಳೆಗಳು ಶ್ರದ್ದಾ ಅವರದ್ದೇ ಎಂಬುದು ಡಿಎನ್ಎ ವರದಿಯಲ್ಲಿ ಸಾಬೀತಾಗಿದೆ.

ಮುಂಬೈ ಮೂಲದ ಅಫ್ತಾಬ್ ಪೂನವಾಲಾ ಎಂಬಾತ ಕಳೆದ ಮೇ 18 ರಂದು ತನ್ನ ಪ್ರೇಯಸಿ ಶ್ರದ್ಧಾ ವಾಕರ್ ನನ್ನು ಕೊಲೆ ಮಾಡಿ ಬಳಿಕ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ಮೆಹರೌಲಿ ಅರಣ್ಯದಲ್ಲಿ ಎಸೆದಿದ್ದ. ಪ್ರಕರಣಕ್ಕೆ ಸಂಬಂಧಿಸಿ ಅಫ್ತಾಬ್‌ನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ವೇಳೆ ಮೆಹರೌಲಿ ಅರಣ್ಯದಲ್ಲಿ ಮೂಳೆಗಳು ಪತ್ತೆಯಾಗಿತ್ತು ಇದನ್ನು ವಶಕ್ಕೆ ಪಡೆದ ಪೊಲೀಸರು ಡಿಎನ್ಎ ಪರೀಕ್ಷೆಗೆ ಕಳುಹಿಸಿದ್ದರು ಆದರೆ ಇಂದು ಬಂದ ವರದಿಯಲ್ಲಿ ಶ್ರದ್ದಾ ಅವರದ್ದೇ ಎಂದು ದೃಢ ಪಟ್ಟಿದೆ.

ಇದನ್ನೂ ಓದಿ: ಯಡಿಯೂರಪ್ಪ, ವಿಜಯೇಂದ್ರ, ಶ್ರೀನಿವಾಸ ಪ್ರಸಾದ್ ನನಗೆ ಹಣ ಕೊಡಲು ಬಂದಿದ್ದರು‌: ವಿಶ್ವನಾಥ್

Advertisement

Udayavani is now on Telegram. Click here to join our channel and stay updated with the latest news.

Next