Advertisement

ನಾನು ಮತ್ತೆ ಸಿಎಂ ಆಗಬೇಕೆ..? ಪ್ರಿಯಾಂಕಾ ಭವಿಷ್ಯದ ಬೆನ್ನಲ್ಲೇ ಜನರಿಗೆ ಚೌಹಾಣ್ ಪ್ರಶ್ನೆ

01:15 PM Oct 07, 2023 | Team Udayavani |

ಭೋಪಾಲ್: ವರ್ಷಾಂತ್ಯದ ವಿಧಾನಸಭಾ ಚುನಾವಣೆಯ ನಂತರ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಉನ್ನತ ಸ್ಥಾನದಿಂದ ನಿರ್ಗಮಿಸುತ್ತಾರೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ, ಚೌಹಾಣ್ ಅವರು ರ್ಯಾಲಿಯಲ್ಲಿ, “ನಾನು ಮತ್ತೆ ಮುಖ್ಯಮಂತ್ರಿಯಾಗಬೇಕೇ ಅಥವಾ ಬೇಡವೇ” ಎಂದು ಜನರನ್ನು ಕೇಳಿದರು.

Advertisement

ಮುಂಬರುವ ಚುನಾವಣೆಗಳಿಗೆ, ಬಿಜೆಪಿಯು ತನ್ನ ಅಭ್ಯರ್ಥಿಗಳಾಗಿ ಹಲವಾರು ದಿಗ್ಗಜರನ್ನು ಕಣಕ್ಕಿಳಿಸಿದೆ, ಪಕ್ಷವು ಅಧಿಕಾರವನ್ನು ಉಳಿಸಿಕೊಂಡರೆ ಅವರನ್ನು ಮುಖ್ಯಮಂತ್ರಿ ಸ್ಥಾನದ ಸ್ಪರ್ಧಿಗಳೆಂದು ಪರಿಗಣಿಸಬಹುದು. ಚೌಹಾಣ್ ಅವರಿಗೆ ಮತ್ತೆ ಸಿಎಂ ಸ್ಥಾನ ಸಿಗುವುದು ಕಷ್ಟ ಎಂಬ ಮಾತುಗಳು ಕೇಳಿಬರುತ್ತಿದೆ.

ಶುಕ್ರವಾರ ಮಧ್ಯಪ್ರದೇಶದ ದಿಂಡೋರಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವರಾಜ್ ಚೌಹಾಣ್, “ನಾನು ಒಳ್ಳೆಯ ಸರ್ಕಾರವನ್ನು ನಡೆಸುತ್ತಿದ್ದೇನೆಯೇ ಅಥವಾ ಕೆಟ್ಟ ಸರ್ಕಾರವನ್ನು ನಡೆಸುತ್ತಿದ್ದೇನೆಯೆ ಎಂದು ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ. ಹಾಗಾಗಿ, ಈ ಸರ್ಕಾರವು ಮುಂದುವರಿಯಬೇಕೇ ಅಥವಾ ಬೇಡವೇ? ಈ ಮಾಮಾ (ಹಾಗೆಂದು ಅವರು ಜನಪ್ರಿಯ) ಮತ್ತೆ ಮುಖ್ಯಮಂತ್ರಿಯಾಗಬೇಕೋ ಬೇಡವೋ?” ಎಂದು ಪ್ರಶ್ನಿಸಿದರು.

ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾಗಿ ಮುಂದುವರಿಯಬೇಕೇ ಮತ್ತು ಬಿಜೆಪಿಯು (ರಾಜ್ಯ ಮತ್ತು ಕೇಂದ್ರದಲ್ಲಿ) ಅಧಿಕಾರವನ್ನು ಉಳಿಸಿಕೊಳ್ಳಬೇಕೇ ಎಂದು ಅವರು ಜನರನ್ನು ಕೇಳಿದರು. ಸಭಿಕರು ಎರಡೂ ಪ್ರಶ್ನೆಗಳಿಗೆ ಸಕಾರಾತ್ಮಕವಾಗಿ ಉತ್ತರಿಸಿದರು.

“ಪ್ರಧಾನಿ ಮೋದಿಜಿ ಇತ್ತೀಚಿನ ದಿನಗಳಲ್ಲಿ ಶಿವರಾಜ್ ಜಿ ಅವರ ಹೆಸರನ್ನು ಹೇಳಲು ಹಿಂಜರಿಯುತ್ತಿದ್ದಾರೆ … ಕೇವಲ ತಮ್ಮ ಹೆಸರನ್ನು ತೆಗೆದುಕೊಂಡು (ನರೇಂದ್ರ ಮೋದಿ) ನನಗೆ ಮತ ಹಾಕಲು ಜನರನ್ನು ಕೇಳುತ್ತಿದ್ದಾರೆ. ಈಗ ಅವರು (ಶಿವರಾಜ್ ಚೌಹಾಣ್) ನಿಮ್ಮ ಸಿಎಂ ಆಗುವುದಿಲ್ಲ ಎಂದು ಗಾಂಧಿ-ವಾದ್ರಾ ಹೇಳಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next