Advertisement
ಹತ್ತು ವರ್ಷಗಳ ಹಿಂದೆ (2009) ನಗರವನ್ನು ಬೆಚ್ಚಿಬೀಳಿಸಿದ್ದ ಒಂದೇ ಕುಟುಂಬದ ಮೂವರ ಬರ್ಬರ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ 66ನೇ ಸೆಷನ್ಸ್ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ. ರಾಮಮೂರ್ತಿನಗರದ ರಮೇಶ್, ಆತನ ಸ್ನೇಹಿತರಾದ ಲೋಕೇಶ್, ಮುರಳಿ ಮತ್ತು ಭಾಸ್ಕರ ಶಿಕ್ಷೆಗೊಳಗಾದವರು.
Related Articles
Advertisement
ಆದರೂ ಪತ್ನಿ ಪುಷ್ಪಲತಾ ಮತ್ತು ರಮೇಶ್ ಅಕ್ರಮ ಸಂಬಂಧ ಮುಂದುವರಿಸಿದ್ದರು. ಹೀಗಾಗಿ ದಂಪತಿ ನಡುವೆ ಪದೇ ಪದೆ ಜಗಳ ನಡೆಯುತ್ತಿತ್ತು. ಇದರಿಂದ ಕೋಪಗೊಂಡಿದ್ದ ರಮೇಶ್, ತನ್ನ ಸ್ನೇಹಿತರಾದ ಲೋಕೇಶ್, ಮುರಳಿ ಮತ್ತು ಭಾಸ್ಕರಗೆ ಹಣದ ಆಮಿಷವೊಡ್ಡಿ ರಾಹುಲ್ದಾಸ್ ಕೊಲೆಗೆ ಸಂಚು ರೂಪಿಸಿದ್ದ.
ಉಸಿರುಗಟ್ಟಿಸಿ ಕೊಲೆ: ಈ ಸಂಬಂಧ 2009ರ ಅ.20ರಂದು ಸಂಜೆ 5.30ಕ್ಕೆ ರಮೇಶ್ ಸೂಚನೆ ಮೇರೆಗೆ ಲೋಕೇಶ್, ಮುರಳಿ ಮತ್ತು ಭಾಸ್ಕರ, ಜಯಂತಿನಗರದಲ್ಲಿರುವ ರಾಹುಲ್ದಾಸ್ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ಒಬ್ಬರೇ ಇದ್ದ ರಾಹುಲ್ದಾಸ್ರನ್ನು ಉಸಿರುಗಟ್ಟಿಸಿ ಕೊಲೆಗೈದು, ಶವವನ್ನು ಶೌಚಾಲಯದಲ್ಲಿದ್ದ ನೀರು ತುಂಬಿದ ಬಕೆಟ್ನಲ್ಲಿ ತಲೆ ಮುಳುಗಿಸಿ, ಕಾಲುಗಳನ್ನು ಪೈಪ್ಗೆ ಕಟ್ಟಿ ಹಾಕಿದ್ದರು. ನಂತರ ಕೆಲ ಹೊತ್ತು ಅಲ್ಲಿಯೇ ಮದ್ಯ ಸೇವಿಸಿದ್ದಾರೆ.
ಅಷ್ಟರಲ್ಲಿ ಪುತ್ರಿ ಅಗ್ನಿಸಾ ದಾಸ್ರನ್ನು ಶಾಲೆಯಿಂದ ಕರೆದುಕೊಂಡು ಬಂದ ಪುಷ್ಪಲತಾ ದಾಸ್ರನ್ನು ಕಂಡ ಆರೋಪಿಗಳು, ತಾಯಿ ಮತ್ತು ಪುತ್ರಿಯನ್ನು ಕೊಣೆಯೊಂದಕ್ಕೆ ಎಳೆದೊಯ್ದು ಉಸಿರುಗಟ್ಟಿಸಿ ಕೊಲೆಗೈದು, ಶವಗಳನ್ನು ಸ್ನಾನದ ಕೋಣೆಯಲ್ಲಿ ನೀರು ತುಂಬಿದ ಟಬ್ನಲ್ಲಿ ಹಾಕಿ, ಪರಾರಿಯಾಗಿದ್ದರು. ಮೂರು ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿತ್ತು. ಇದು ಇಡೀ ನಗರವನ್ನೆ ಬೆಚ್ಚಿಬೀಳಿಸಿತ್ತು.
ಅಗ್ನಿಸಾ ಕೈಲಿ ಆರೋಪಿಗಳ ಕೂದಲು!: ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ರಾಮಮೂರ್ತಿನಗರ ಪೊಲೀಸರಿಗೆ, ಕೊಲೆಯಾದ ದಾಸ್ ದಂಪತಿಯ ಪುತ್ರಿ ಅಗ್ನಿಸಾ ದಾಸ್ ಅವರ ಕೈಯಲ್ಲಿ ಆರೋಪಿ ಭಾಸ್ಕರನ ತಲೆ ಕೂದಲುಗಳು ದೊರೆತಿದ್ದವು. ಕೊಲೆಯಾದ ಸ್ಥಳದಲ್ಲಿದ್ದ ಬೆಡ್ಶಿಟ್ನಲ್ಲಿ ಮುರಳಿ ಮತ್ತು ಭಾಸ್ಕರನ ತಲೆ ಕೂದಲುಗಳು ಬಿದ್ದಿದ್ದವು. ಜತೆಗೆ ಮದ್ಯದ ಬಾಟಲಿಗಳ ಮೇಲೆ ಆರೋಪಿಗಳ ಬೆರಳಚ್ಚು ಸಿಕ್ಕಿತ್ತು. ಈ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ ವೈಜ್ಞಾನಿಕ ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.