Advertisement

ಹೊತ್ತಿ ಉರಿದ ಮನೆ: ಮಹಿಳೆ ಸಜೀವ ದಹನ

11:49 AM Oct 28, 2018 | Team Udayavani |

ಪೂಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಕಾವಳಮಡೂರು ಗ್ರಾಮದಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಮನೆಗೆ ಹೊತ್ತಿ ಉರಿದು ಮಹಿಳೆ ಸಜೀವ ದಹನಗೊಂಡ ಘಟನೆ ಶನಿವಾರ ತಡರಾತ್ರಿ ನಡೆದಿದೆ. 

Advertisement

ಮೃತ ಮಹಿಳೆಯನ್ನು ರೇವತಿ (40) ಎಂದು ಗುರುತಿಸಲಾಗಿದೆ. ಇವರು ಅವಿವಾಹಿತೆಯಾಗಿದ್ದು, ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. 

ಒಂದು ವಾರದ ಹಿಂದೆ ಈ ಮನೆಗೆ ಸಿಡಿಲು ಬಡಿದಿದ್ದು, ನಂತರ ರೇವತಿ ಅವರು ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದರು. ಶನಿವಾರವಷ್ಟೇ ತಮ್ಮ ಮನೆಗೆ ಹಿಂದುರಿಗಿದ್ದು, ಅಂದೇ ಈ ಅವಗಢ ಸಂಭವಿಸಿದೆ. 

ಮನೆಯೊಳಗೆ ಕಟ್ಟಿಗೆ ರಾಶಿ ಹಾಕಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿಕೊಂಡ ಬೆಂಕಿ ಕಟ್ಟಿಗೆ ರಾಶಿಗೆ ತಗುಲಿ ಮನೆಗೆ ವ್ಯಾಪಿಸಿರಬಹುದು ಎಂದು ಶಂಕಿಸಲಾಗಿದೆ. 

ತಡರಾತ್ರಿ ಮನೆ ಹೊತ್ತಿ ಉರಿಯುದನ್ನು ಕಂಡ ಊರವರು ತಕ್ಷಣ ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರೂ ಮಹಿಳೆಯನ್ನು ಉಳಿಸಿಕೊಳ್ಳಲಾಗಲಿಲ್ಲ. 


ರೇವತಿ ಅವರ ಮೃತದೇಹ ಸಂಪೂರ್ಣ ಸುಟ್ಟು ಹೋಗಿದ್ದು, ಬಂಟ್ವಾಳ ಸರಕಾರಿ ಆಸ್ಪತೆಯಲ್ಲಿ ಇರಿಸಲಾಗಿದೆ.  ಪೂಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next