Advertisement

28ರಂದು ಅಂಗಡಿ ಮುಗ್ಗಟ್ಟು ಬಂದ್‌

04:36 PM Feb 26, 2020 | Suhan S |

ದೊಡ್ಡಬಳ್ಳಾಪುರ:ನಗರದಲ್ಲಿ ತಲೆ ಎತ್ತುತ್ತಿರುವ ಮಾಲ್‌ಗ‌ಳು, ಆನ್‌ಲೈನ್‌ ಕಂಪನಿಗಳಿಂದ ವ್ಯಾಪಾರಸ್ಥರಿಗೆ ಹೊಡೆತ ಬೀಳುತ್ತಿದೆ. ಇದಕ್ಕೆ ಪೂರಕವಾದ ಸರ್ಕಾರದ ನೀತಿಗಳ ವಿರುದ್ಧ ಹಾಗೂ ವ್ಯಾಪಾರಸ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 28ರಂದು ತಾಲೂಕಿನಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ದಿನಸಿ ವರ್ತಕರ ಸಂಘದ ಅಧ್ಯಕ್ಷ ಜಿ.ಎಸ್‌.ಸೋಮರುದ್ರ ಶರ್ಮಾ ತಿಳಿಸಿದರು.

Advertisement

ದಿನಸಿ ವರ್ತಕರ ಸಂಘದ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ದುಬಾರಿ ಬಾಡಿಗೆ, ಜೀವನ ವೆಚ್ಚಗಳಿಂದ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿರುವುದು ಹೆಚ್ಚಾಗಿದೆ. ಇದಕ್ಕೆ ರಿಯಾಯಿತಿ ಎಂಬ ಹೆಸರಿನಲ್ಲಿ ದೊಡ್ಡ ಮಾಲ್‌ಗ‌ಳ ಸೆಳೆತ ಕಾರಣವಾಗಿದೆ. ಆದರೆ, ರಿಯಾಯಿತಿ ದರದಲ್ಲಿ ನೀಡುವ ದಿನಸಿ, ಇತರೆ ಸಾಮಾನು ಕಳಪೆ ಗುಣಮಟ್ಟದ್ದಾಗಿರುತ್ತದೆ ಎನ್ನುವುದನ್ನು ಗ್ರಾಹಕರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ರಿಯಾಯಿತಿ ಮೋಸದ ಜಾಲ ನಿಯಂತ್ರಣಕ್ಕೆ ಕ್ರಮ, ವ್ಯಾಪಾರಸ್ಥರ ಉಳಿವು ಹಿತ ಕಾಪಾಡಲು ಸರ್ಕಾರ ನಿಗಮ ಮಂಡಳಿ ಅಸ್ತಿತ್ವಕ್ಕೆ ತರಬೇಕು, ವ್ಯಾಪಾರಿಗಳ ಪ್ರತಿನಿಧಿಗಳಿಗೆ ವಿಧಾನ ಪರಿಷತ್ತಿನಲ್ಲಿ ಅವಕಾಶ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದರು.

ದಿನಸಿ ವರ್ತಕರ ಸಂಘದ ಕಾರ್ಯದರ್ಶಿ ಎಂ.ಸಿ.ರಘುನಾಥ್‌ ಮಾತನಾಡಿ, ನಗರ ಪ್ರದೇಶಗಳಲ್ಲಿದ್ದ ಮಾಲ್‌ಗ‌ಳು ಇಂದು ತಾಲೂಕು ಮಟ್ಟಕ್ಕೂ ವ್ಯಾಪಿಸಿದ್ದು, ವ್ಯಾಪಾರವನ್ನು ನೆಮ್ಮದಿ ಹದಗೆಡಿಸುತ್ತಿವೆ. ಇತ್ತೀಚಿನ ವರದಿಯಂತೆ ಮಾಲ್‌ ಗಳಲ್ಲಿನ ವಹಿವಾಟಿನಲ್ಲಿ ಸಹಸ್ರಾರು ರೂ.ನಷ್ಟ ತೋರಿಸುತ್ತಿವೆ. ಕೊಂಡ ಬೆಲೆಗಿಂತಲೂ ಕಡಿಮೆ ಮಾರಾಟ ಮಾಡಿ, ಗ್ರಾಹಕರನ್ನು ಸೆಳೆದು ನಂತರ ಇಡೀ ಮಾರುಕಟ್ಟೆಯನ್ನು ಆಕ್ರಮಿಸುವ ಹುನ್ನಾರ ಇದಾಗಿದೆ.

ತೆರಿಗೆಯೂ ವಂಚಿಸಲಾಗುತ್ತಿದೆ. ಇದರಿಂದ ಸಣ್ಣ ಹಾಗೂ ಮಧ್ಯಮ ವರ್ಗದ ಜನ ಬೀದಿಪಾಲಾಗುತ್ತಿದ್ದು, ವ್ಯಾಪಾರಿಗಳ ಹಾಗೂ ಗ್ರಾಹಕರ ನಡುವಿನ ಬಾಂಧವ್ಯ ಮರೆಯಾಗಲಿದೆ. 28ರಂದು ನಗರದ ನೆಲದಾಂಜನೇಯಸ್ವಾಮಿ ದೇವಾಲಯ ಬಳಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿ, ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಈ ಕಾರ್ಯಕ್ರಮಕ್ಕೆ ತಾಲೂಕು ವಿತರಕರ ಸಂಘ, ಔಷಧಿ ವ್ಯಾಪಾರಿಗಳ ಸಂಘ, ಬಟ್ಟೆ ವ್ಯಾಪಾರಿಗಳ ಸಂಘ, ಫ್ಯಾನ್ಸಿ ಸ್ಟೋರ್ ಮೊದಲಾದ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದರು.

Advertisement

ಹಿರಿಯ ವರ್ತಕ ಎಂ.ಜೆ. ರಾಜಶೇಖರ ಶೆಡ್ಡಿ ಮಾತನಾಡಿ, ಮಾಲ್‌ನಲ್ಲಿ ಇತ್ತೀಚೆಗೆ ಖರೀದಿಸಿದ್ದ ಜನಪ್ರಿಯ ಬ್ಯಾಂಡ್‌ನ‌ ಸೋಪಿನ ಗುಣಮಟ್ಟ ತೀರಾ ಕಳಪೆಯಾಗಿದ್ದ ಆರೋಪ ಕೇಳಿ ಬಂದಿದೆ. ಮಾಲ್‌ಗ‌ಳ ಉತ್ಪನ್ನಗಳ ಗುಣಮಟ್ಟದ ಸರಿಯಾದ ತನಿಖೆಯಾಗಬೇಕು. ವರ್ತಕರು ತೆರಿಗೆ ಕಟ್ಟುವ ಮೂಲಕ ಸರ್ಕಾರಕ್ಕೆ ಆಸರೆಯಾಗಿದೆ. ಆದರೆ ಮಾರ್ಟ್ ಗಳು ತೆರಿಗೆ ಕೂಡ ವಂಚಿಸುತ್ತಿದ್ದು, ವ್ಯಾಪಾರಸ್ತರ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದರು.

ಸಭೆಯಲ್ಲಿ ದಿನಸಿ ವರ್ತಕರ ಸಂಘದ ಖ ಜಾಂಚಿ ಡಿ.  ಎ ನ್‌. ರಾ ಮಯ್ಯ ಶೆಟ್ಟಿ,ನಿರ್ದೇಶಕರಾದ ಸಿ . ಎ .ರವಿ ಪ್ರಸಾದ್ , ವಿ . ಎಸ್ . ರಾಜೇಶ್,  ಕೆ.ಜಿ.ನಂಜುಂಡಯ್ಯ, ಮಾಜಿ ಅಧ್ಯಕ್ಷ ಆರ್‌.ವಿ.ಶಿವಣ್ಣ, ವಿತರಕರ ಸಂಘದ ಅಧ್ಯಕ್ಷ ಕೆ.ಎನ್‌.ಪ್ರಭಾಕರ್‌, ಕಾರ್ಯದರ್ಶಿ ಪ್ರಕಾಶ್‌, ನಿರ್ದೇಶಕರಾದ ಸಿ.ಎನ್‌. ಗಿರೀಶ್‌, ಮಹೇಶ್‌ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next