Advertisement

ಕಲಬುರಗಿಯಲ್ಲಿ ಮತ್ತೆ ಶೂಟೌಟ್‌

06:55 AM Jan 11, 2018 | Team Udayavani |

ಕಲಬುರಗಿ: ಕೊಲೆ, ದರೋಡೆ ಸೇರಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿಶೀಟರ್‌ನನ್ನು
ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆತನ ಮೇಲೆ ಗುಂಡು ಹಾರಿಸಿರುವ ಘಟನೆ ಬುಧವಾರ ಬೆಳ್ಳಂಬೆಳಗ್ಗೆ ನಗರದ ಹೊರ ವಲಯ ಕೆಸರಟಗಿ ಆಶ್ರಯ ಕಾಲೋನಿ ಹತ್ತಿರ ನಡೆದಿದೆ.

Advertisement

ನಂದೂರ ಕೆ ಗ್ರಾಮದ 23 ವರ್ಷದ ಮಲ್ಲಿಕಾರ್ಜುನ ಕಡಬೂರ ಅಲಿಯಾಸ್‌ ಕಡಬೂರ ಮಲ್ಲಾ ಚಂದ್ರಕಾಂತ ಮೇಲೆ ಪೊಲೀಸರು ಪ್ರಾಣರಕ್ಷಣೆಗೆ ಹಾರಿಸಿದ ಎರಡು ಗುಂಡುಗಳು ಕಾಲಿಗೆ ಹಾಗೂ ಕೈಗೆ ಹೊಕ್ಕಿದ್ದರ ಪರಿಣಾಮ ಗಾಯಗೊಂಡು ಜಿಲ್ಲಾಸ್ಪತ್ರೆಗೆ ಸೇರಿದ್ದಾನೆ. ಇದೇ ದಾಳಿಯಲ್ಲಿ ಅನಿಲಕುಮಾರ ಹಾಗೂ ವಿಶ್ವನಾಥ ಎಂಬ ಪೇದೆಗಳು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈಶಾನ್ಯ ವಲಯ ಐಜಿಪಿ ಎಸ್‌. ಮುರುಘನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶಶಿಕುಮಾರ ಸೇರಿ ಇತರ ಪೊಲೀಸ್‌ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ. ಆ.1ರಂದು ಎನ್‌ಕೌಂಟರಿನಲ್ಲಿ ಬಲಿಯಾಗಿದ್ದ ಕುಖ್ಯಾತ ರೌಡಿ ಕರಿಚಿರತೆ ಅಲಿಯಾಸ್‌ ಮಲ್ಲಿಕಾರ್ಜುನ ಬಡಿಗೇರ ಸಹಚರನಾಗಿದ್ದ
ಮಲ್ಲಿಕಾರ್ಜುನ ಕಡಬೂರ ಅನೇಕ ಪ್ರಕರಣದಲ್ಲಿ ಭಾಗಿಯಾಗಿದ್ದು, ಈತನ ಬಂಧನ ಪೊಲೀಸರಿಗೆ ಸವಾಲಾಗಿತು.

Advertisement

Udayavani is now on Telegram. Click here to join our channel and stay updated with the latest news.

Next