Advertisement

ತಿಂಗಳಾಂತ್ಯಕ್ಕೆ ಶೂಟಿಂಗ್‌ ಆರಂಭ

11:11 AM May 02, 2019 | pallavi |

“ಕಟಪಾಡಿ ಕಟ್ಟಪ್ಪ’ ಸಿನೆಮಾ ಸದ್ಯ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಕ್ರೇಝ್ ಹುಟ್ಟುಹಾಕಿದೆ. ರಾಜೇಶ್‌ ಬ್ರಹ್ಮಾವರ ನಿರ್ಮಾಣ, ಜೆ.ಪಿ. ತುಮಿನಾಡ್‌ ನಿರ್ದೇಶನದ ಕಟ್ಟಪ್ಪ ತುಳು ಸಿನೆಮಾ ಸದ್ಯ ಸಖತ್‌ ಯಶಸ್ಸು ಪಡೆಯುವ ಹಾದಿಯಲ್ಲಿದೆ. ಇದೇ ಮೂಡ್‌ನ‌ಲ್ಲಿರುವಾಗ ರಾಜೇಶ್‌ ಬ್ರಹ್ಮಾವರ ಅವರು ಈಗ ಮತ್ತೂಂದು ಸಿನೆಮಾ “ಮಾಜಿ ಮುಖ್ಯಮಂತ್ರಿ’ಯ ಕೊನೆಯ ಹಂತದಲ್ಲಿದ್ದಾರೆ.

Advertisement

ಅದೇ ವೇಳೆಗೆ ಬ್ರಹ್ಮಾವರ ಅವರು ಮತ್ತೂಂದು ಸಿನೆಮಾದ ಬಗ್ಗೆ ಲೆಕ್ಕ ಹಾಕಿದ್ದಾರೆ. “ಜ್ಯೋತಿ ಸರ್ಕಲ್‌’ ಎಂಬ ಟೈಟಲ್‌ನ ಈ ಸಿನೆಮಾ ಇದೇ ತಿಂಗಳ ಅಂತ್ಯದ ವೇಳೆಗೆ ಶೂಟಿಂಗ್‌ ಆರಂಭಿಸಲಿದೆ. ರಾಜೇಶ್‌ ಬಂದ್ಯೋಡು ನಿರ್ದೇಶನದಲ್ಲಿ ಈ ಸಿನೆಮಾ ಮೂಡಿಬರಲಿದೆ. ತುಳುವಿನಲ್ಲಿ ವಿಭಿನ್ನ ಕಥಾನಕವನ್ನು ಹೊಂದಿರುವ ಸಿನೆಮಾ ಎಂಬ ಹೆಗ್ಗಳಿಕೆಯನ್ನು ಜ್ಯೋತಿ ಸರ್ಕಲ್‌ ಪಡೆದುಕೊಳ್ಳಲಿದೆ.

ಹೊಸ ತರದ ಕಥೆಯಾಧಾರಿತವಾಗಿ ಸಿನೆಮಾ ರೂಪುಗೊಳ್ಳಲಿದೆ. ಸಿನೆಮಾದಲ್ಲಿ ಯಾರಿರಲಿದ್ದಾರೆ ಎಂಬುದಕ್ಕೆ ಸದ್ಯ ಉತ್ತರವಿಲ್ಲ. ಆದರೆ, ಹೊಸ ಮುಖಗಳೊಂದಿಗೆ ಹೊಸ ಜಮಾನ ಸೃಷ್ಟಿಸಬೇಕು ಎಂಬುದು ರಾಜೇಶ್‌ ಅವರ ಚಿಂತನೆ. ಹೀಗಾಗಿ ಯಾರೆಲ್ಲ ಕಲಾವಿದರು ಇದ್ದಾರೆ ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next