Advertisement

Shocking; ಹೆರಿಗೆ ವೆಚ್ಚ ಹೆಚ್ಚಾಗಿದ್ದಕ್ಕೆ ಬಾಣಂತಿಯನ್ನೆ ಹತ್ಯೆಗೈದ ಪತಿ!!

04:26 PM Dec 17, 2023 | Team Udayavani |

ರಾಯಚೂರು: ನಗರದ ಲಾಡ್ಜ್ ನಲ್ಲಿ ಮಹಿಳೆ ನೇಣು ಬಿಸಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ದೊಡ್ಡ ಟ್ವಿಸ್ಟ್ ದೊರಕಿದ್ದು, ಪತಿಯೇ ಕೊಲೆ ಮಾಡಿರುವ ಸತ್ಯಾಂಶ ಬಯಲಾಗಿದೆ. ಉತ್ತರ ಪ್ರದೇಶದ ಹತ್ರಾಸ ಮೂಲದ ಸೋನಿ (24) ಶವ ಕಳೆದ ಬುಧವಾರ ಬೆಳಗಿನ ನಗರದ ಸಂತೋಷಿ ಲಾಡ್ಜ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಿಕ್ಕಿತ್ತು.

Advertisement

ಪತಿ ಅವಿನಾಶ ಹಾಗೂ ಸೋನಿ ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿ ಇಲ್ಲಿಗೆ ಬಂದು ನೆಲೆಸಿದ್ದರು. ಸೋನಿಗೆ ಈಚೆಗೆ ಹೆರಿಗೆಯಾಗಿದ್ದು, 20 ದಿನಗಳ ಹಸುಗೂಸಿತ್ತು. ಸೋನಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳು. ಇದರಿಂದ ಪತಿ ಅವಿನಾಶ ಸದಾ ಆಕೆಯನ್ನು ನಿಂದಿಸುತ್ತಿದ್ದ. ಮಗುವನ್ನು ಸರಿಯಾಗಿ ನೋಡಿಕೊಳ್ಳಲು ಬರುವುದಿಲ್ಲ ಎಂದು ರೇಗಾಡುತ್ತಿದ್ದ. ಕೊನೆಗೆ ತಾನೆ ಕೊಲೆ ಮಾಡಿ ನೇಣು ಬಿಗಿದ ಸ್ಥಿತಿಯಲ್ಲಿ ನೇತು ಹಾಕಿರುವುದು ತನಿಖೆ ವೇಳೆ ಗೊತ್ತಾಗಿದೆ.

ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಂಬಿಸಲು ಯತ್ನಿಸಿದ್ದ. ಪೊಲೀಸರ ತೀವ್ರ ತನಿಖೆ ನಡೆಸಿದಾಗ ಕೊಲೆ ಎಂಬುದು ಸಾಬೀತಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮಗುವನ್ನು ಸೌಹಾರ್ದ ಕೇಂದ್ರಕ್ಕೆ ನೀಡಲಾಗಿದೆ ಎಂದು ಎಸ್ ಪಿ ನಿಖಿಲ್ ಬುಳ್ಳಾವರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next