Advertisement

BRSಗೆ ಶಾಕ್‌: 6 ಎಂಎಲ್‌ಸಿಗಳು ಕಾಂಗ್ರೆಸ್‌ ಸೇರ್ಪಡೆ!

01:15 AM Jul 06, 2024 | Team Udayavani |

ಹೈದರಾಬಾದ್‌: ಕೆ.ಚಂದ್ರಶೇಖರ ರಾವ್‌ ನೇತೃತ್ವದ ಬಿಆರ್‌ಎಸ್‌ನ 6 ಎಂಎಲ್‌ಸಿಗಳು ಬುಧವಾರ ತಡರಾತ್ರಿ ಆಡಳಿತರೂಢ ಕಾಂಗ್ರೆಸ್‌ ಸೇರ್ಪಡೆಗೊಂಡಿದ್ದಾರೆ. ಸಿಎಂ ರೇವಂತ್‌ ರೆಡ್ಡಿ ಸರಕಾರ‌ ಬಂದಾಗಿನಿಂದ ಬಿಆರ್‌ಎಸ್‌ನ ಹಲವು ನಾಯಕರು ಪಕ್ಷ ತೊರೆಯುತ್ತಿರುವಂತೆಯೇ ಈ ಬೆಳವಣಿಗೆ ಮಹತ್ವ ಪಡೆದಿದೆ

Advertisement

. ಸಿಎಂ ನಿವಾಸದಲ್ಲೇ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಈ ಮೂಲಕ ತೆಲಂಗಾಣ ವಿಧಾನ ಪರಿಷತ್‌ನಲ್ಲಿ ಬಿಆರ್‌ಎಸ್‌ನ ಬಲ 25ರಿಂದ 19ಕ್ಕೆ ಕುಸಿದಿದೆ ಹಾಗೂ 4 ಎಂಎಲ್‌ಸಿಗಳಿದ್ದ ಕಾಂಗ್ರೆಸ್‌ನ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಪಕ್ಷಾಂತರಗೊಳ್ಳುವ ಶಾಸಕರು, ಸಂಸದರು ಸ್ವಯಂಪ್ರೇರಿತರಾಗಿ ಅನರ್ಹ ಗೊಳ್ಳುವ ಬಗ್ಗೆ 10ನೇ ಶೆಡ್ನೂಲ್‌ ತಿದ್ದುಪಡಿ ಮಾಡು ವುದಾಗಿ ಭರವಸೆ ಏನಾಯಿತು ಎಂದು ಬಿಆರ್‌ಎಸ್‌ ನಾಯಕ ಕೆಸಿಆರ್‌ ಕಾಂಗ್ರೆಸನ್ನು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next