Advertisement

ಗೋವಾ: ಹಾಡಹಗಲೇ ಯುವಕನನ್ನು ಇರಿದು ಕೊಂದ ದುಷ್ಕರ್ಮಿಗಳು

02:43 PM Sep 06, 2022 | Team Udayavani |

ಪಣಜಿ: ಹಾಡಹಗಲೇ ಯುವಕನೊಬ್ಬನನ್ನು ಹರಿತವಾದ ಆಯುಧದಿಂದ ಇರಿದು ಕೊಂದಿರುವ ಘಟನೆ ಗೋವಾದ ಬೈನಾ ಬೀಚ್ ನಲ್ಲಿ ಸೋಮವಾರ (ಸೆ.5 ರಂದು) ಮಧ್ಯಾಹ್ನ ನಡೆದಿದೆ.

Advertisement

ಕೊಲೆಯಾದವನನ್ನು ಕೇಟ್ ಬೈನಾ ಮೂಲದ ಉಮೇಶ್ ಹರಿಜನ್ (33) ಎಂದು ಗುರುತಿಸಲಾಗಿದೆ.

ಉಮೇಶ್‌ ಮಧ್ಯಾಹ್ನ ದೇವಸ್ಥಾನದಿಂದ ಊಟ ಮಾಡಿ ಹೊರಗೆ ಬಂದಾಗ, ಅವರ ಮೇಲೆ ನಾಲ್ವರು ದಾಳಿ ಮಾಡಿ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾರೆ. ಈ ಸಂಬಂಧ ಪೊಂಡಾ ಪೊಲೀಸರು ಬನಾಸ್ತರೀಮ್‌ ನಲ್ಲಿ ಇಬ್ಬರು ಶಂಕಿತರನ್ನು ಬಂಧಿಸಿದ್ದಾರೆ.  ಈ ಇಬ್ಬರೂ ಆರೋಪಿಗಳು ಹೊರ ರಾಜ್ಯಕ್ಕೆ ಓಡಿ ಹೋಗಲು ತಯಾರಿ ನಡೆಸಿದ್ದರು ಎನ್ನಲಾಗಿದೆ. ಇತರ ಆರೋಪಿಗಳ ಹುಡುಕಾಟಕ್ಕೆ ಬಲೆ ಬೀಸಲಾಗಿದೆ.

ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೃತ ಉಮೇಶ್‌ ಹರಿಜನ್‌ ಬಾರ್‌ ವೊಂದನ್ನು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next