Advertisement

ಬೈಲೂರು: ಕ್ವಾರಂಟೈನ್‌ ಕೇಂದ್ರಕ್ಕೆ ಶೋಭಾ ಕರಂದ್ಲಾಜೆ ಭೇಟಿ

10:59 PM May 28, 2020 | Sriram |

ಅಜೆಕಾರು: ಬೈಲೂರಿನ ಜೂನಿಯರ್‌ ಕಾಲೇಜಿನಲ್ಲಿರುವ ಹೊರ ರಾಜ್ಯಗಳಿಂದ ಆಗಮಿಸಿರುವವರ ಕ್ವಾರಂಟೈನ್‌ ಕೇಂದ್ರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಕ್ವಾರಂಟೈನ್‌ ಕೇಂದ್ರದಲ್ಲಿ ಮುಂಬಯಿ, ಪುಣೆ ಹಾಗೂ ದೇಶದ ವಿವಿಧ ಭಾಗ ಗಳಿಂದ ಆಗಮಿಸಿದ ನಾಗರಿಕರೂ ಇದ್ದಾರೆ. ಕೋವಿಡ್‌-19 ವಿರುದ್ಧ ಹೋರಾಡುತ್ತಿರುವ ಆರೋಗ್ಯ ಸಿಬಂದಿ, ಕ್ವಾರಂಟೈನ್‌ ಕೇಂದ್ರದಲ್ಲಿ ಗುಣಮಟ್ಟದ ಊಟೋ ಪಹಾರವನ್ನು ಪೂರೈಸುತ್ತಿರುವವರನ್ನು ಸಂಸದರು ಗೌರವಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ ನಾಯಕ್‌ ಕುಯಿಲಾಡಿ, ಪ್ರಧಾನ ಕಾರ್ಯದರ್ಶಿ ನವೀನ ಶೆಟ್ಟಿ ಕುತ್ಯಾರ್‌, ಜಿ.ಪಂ. ಸದಸ್ಯ ಸುಮಿತ್‌ ಶೆಟ್ಟಿ, ಕ್ವಾರಂಟೈನ್‌ ಸೇವಾ ಪ್ರಮುಖ್‌ ಸಚ್ಚಿದಾನಂದ ಶೆಟ್ಟಿ, ಜಗದೀಶ್‌ ಪೂಜಾರಿ, ಸುರೇಶ್‌ ಶೆಟ್ಟಿ, ಮಹೇಶ್‌ ಶೆಟ್ಟಿ, ಶರತ್‌ ಶೆಟ್ಟಿ, ಮಹಾವೀರ, ಜಗದೀಶ್‌ ತೆಂಡುಲ್ಕರ್‌, ಉಮೇಶ್‌ ರಂಗನಪಲ್ಕೆ, ವಿಶ್ವೇಶ್‌, ನೋಡಲ್‌ ಅಧಿಕಾರಿ ಶ್ರೀನಿವಾಸ್‌, ಶಿಕ್ಷಕರಾದ ಹರೀಶ ಶೆಟ್ಟಿ, ಉಮೇಶ್‌ ನಾಯ್ಕ, ಸುರೇಶ್‌, ಫೆಡ್ರಿಕ್‌ ರೆಬೆಲ್ಲೊ, ವೈದ್ಯಕಿಯ ಅಧಿಕಾರಿ ಡಾ| ಮಹಾಂತೇಶ್‌ ಹೆಗ್ಡೆ ಹಾಗೂ ಸಿಬಂದಿ ಉಪಸ್ಥಿತರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next