Advertisement

ಚರ್ಚ್ ಗಳಲ್ಲಿ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಅಪಪ್ರಚಾರ ಮಾಡಲಾಗುತ್ತಿದೆ : ಶೋಭಾ

03:38 PM May 19, 2021 | Team Udayavani |

ಚಿಕ್ಕಮಗಳೂರು : ಮೂಡಿಗೆರೆ, ಆಲ್ದೂರಿನ ಕೆಲ ಚರ್ಚ್ ಗಳಲ್ಲಿ ವ್ಯಾಕ್ಸಿನ್ ತಗೋಬೇಡಿ ಅಂತ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಚಿಕ್ಕಮಗಳೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ನೀಡಿದ್ದಾರೆ.

Advertisement

ಮತಾಂತರಗೊಂಡವರು ಚರ್ಚಿಗೆ ಹೋದಾಗ ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ. ಯಾರು, ಏಕೆ ಹೀಗೆ ಹೇಳ್ತಿದ್ದಾರೆ ಎಂಬುದನ್ನ ಪತ್ತೆ ಮಾಡಬೇಕು. ಅವರು ವ್ಯಾಕ್ಸಿನ್ ತೆಗೆದುಕೊಳ್ತಾರೆ ಬೇರೆಯವರಿಗೆ ಬೇಡ ಅಂತಾರೆ.

ಕ್ಯಾಥೋಲಿಕ್ ಚರ್ಚ್ ಹೇಳಿದ್ದು ಅಂತಲ್ಲ, ಅದರಲ್ಲೇ ಬೇರೆ ಚರ್ಚ್ ಇರಬಹುದು. ಪ್ರಾಟೆಸ್ಟೆಂಟ್, ಸೆಂಥಕೋಸ್ಟ್ ಈ ರೀತಿ ಇತ್ತೀಚೆಗೆ ಬಂದ ಚರ್ಚ್‍ಗಳಿಂದ ಅಪಪ್ರಚಾರ ನಡೆಯುತ್ತಿದೆ. ಅವರ ಬಗ್ಗೆ ತನಿಕೆ ಮಾಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ ಸಂಸದೆ ಶೋಭಾ ಹೇಳೀದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next