Advertisement

ಟ್ವಿಟರ್‌ನಲ್ಲಿ ಶೋಭಾ ಸಂಭ್ರಮ

11:46 PM Aug 05, 2019 | Team Udayavani |

ಉಡುಪಿ: “ಜನಸಂಘದ ಸ್ಥಾಪಕ ಡಾ| ಶ್ಯಾಮ ಪ್ರಸಾದ ಮುಖರ್ಜಿಯವರ ಕನಸು 72 ವರ್ಷಗಳ ಬಳಿಕ ನನಸಾಗಿದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. “ನನೆಗುದಿಗೆ ಬಿದ್ದ ಕಲಂ 370ನೆಯ ವಿಧಿ, 35ಎ ರದ್ದುಪಡಿಸಲು ಇಷ್ಟು ವರ್ಷ ಬೇಕಾಯಿತು.

Advertisement

ಇಂತಹ ದೃಢ ನಿರ್ಧಾರ ಕೈಗೊಳ್ಳಲು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅಂತಹ ಬಲಿಷ್ಠರಿಗೆ ಮಾತ್ರ ಸಾಧ್ಯ. ಭಾರತ ಒಂದೇ, ಭಾರತ ಗೆಲುವು ಸಾಧಿಸಿದೆ. ಗಾಂಧಿ ಕುಟುಂಬದ ತಪ್ಪುಗಳನ್ನು ಸರಿಪಡಿಸಲೆಂದು ಜನಿಸಿದ ನರೇಂದ್ರ ಮೋದಿ ಭಾರತೀಯರೆಲ್ಲ ಒಂದೇ ಎಂಬ ಮಾತಿಗೆ ಸರಿಯಾದ ಅರ್ಥ ಕಲ್ಪಿಸಿಕೊಡುತ್ತಿದ್ದಾರೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next