Advertisement

ಶಿವಪುರ: ಮೌನ ನಾಮಜಪ

11:53 PM Apr 03, 2019 | sudhir |

ಮಂಜೇಶ್ವರ: ಪಾವೂರು ಕೊಪ್ಪಳದ ಶ್ರೀ ಮಹಾ ಮೃತ್ಯುಂಜಯೇಶ್ವರ ದೇವಸ್ಥಾನ ಶಿವಪುರದಲ್ಲಿ ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಅವರು ಕೈಗೊಂಡಿರುವ 48 ದಿನಗಳ ಉದಯಾಸ್ತಮಾನ ಮೌನ ನಾಮಜಪದ 29ನೇ ದಿನದಂದು ಬೆಳಗ್ಗೆ ಗಣಪತಿ ಹವನ, ಬಳಿಕ ಪುಂಡರೀಕಾಕ್ಷರಿಂದ ಮೌನ ನಾಮ ಜಪ ನೂರಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ನಡೆಯಿತು. ಈ ಸಂದರ್ಭ ಭಕ್ತರು ಸಾವಿರ ಸಂಖ್ಯೆಯಲ್ಲಿ ನಾಮ ಜಪ ಮಾಡಿದರು. ಸಂಜೆ ಉಪ್ಪಳ ತಿಂಬರದ ಶ್ರೀ ಲಕ್ಷ್ಮೀà ಭಜನ ಮಂಡಳಿಯವರಿಂದ ಭಜನ ಸಂಕೀರ್ತನೆ ನಡೆಯಿತು. ಸಂಜೆ ಪುಂಡರೀಕಾಕ್ಷ ಯೋಗಾಚಾರ್ಯರಿಂದ ಸತ್ಸಂಗ ನಡೆಯಿತು.

Advertisement

ಈ ಸಂದರ್ಭದಲ್ಲಿ ರಮೇಶ್‌ ಆಳ್ವ ತಿಂಬರ, ಮಾದವ ಶೆಟ್ಟಿ ಬಡಾಜೆ, ಅನಂತ ಪದ್ಮನಾಭ ಕೂಡ್ಲು. ಜಯಶ್ರೀ ಆಳ್ವ ತಿಂಬರ ಉಪ್ಪಳ, ಸುಬ್ಬ ಗುರುಸ್ವಾಮಿ, ಗೋಪಾಲ ಶೆಟ್ಟಿ ಅರಿಬೈಲು ಭಾಗವಹಿಸಿದರು. ಕುಶಾಲಾಕ್ಷಿ ಕಾನದಕಟ್ಟ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next