Advertisement

ಶಿವಾಯ ಫೌಂಡೇಷನ್‌: ಕ್ಯಾನ್ಸರ್‌ ಪೀಡಿತರಿಗೆ ಉಪಾಹಾರ ವಿತರಣೆ

04:38 PM Jul 10, 2018 | |

ಮುಂಬಯಿ: ಶಿವಾಯ ಫೌಂಡೇಷನ್‌ ಮುಂಬಯಿ ವತಿಯಿಂದ ಕ್ಯಾನ್ಸರ್‌ ಪೀಡಿತರಿಗೆ ಬೆಳಗ್ಗೆಯ ಉಪಾಹಾರ ವಿತರಣೆಯನ್ನು ಮಾಡಲಾಯಿತು. ಜು. 7 ರಂದು ಸಮಾಜ ಸೇವಕಿ ಲಕ್ಷಿ¾ ಕೋಟ್ಯಾನ್‌ ಅವರ ಮೊಮ್ಮಗ ಅವೆಯುಕ್‌¤ ಎಸ್‌. ಕೋಟ್ಯಾನ್‌ ಅವರ  ಹುಟ್ಟುಹಬ್ಬದ ಪ್ರಯುಕ್ತ ಅವರ ಪ್ರಾಯೋಜಕತ್ವದಲ್ಲಿ  ಕ್ಯಾನ್ಸರ್‌ ಪೀಡಿತರು ಹಾಗೂ ಅವರ ಪರಿವಾರ ಸದಸ್ಯರಿಗೆ ಆಶ್ರಯ ಒದಗಿಸುತ್ತಿರುವ ಘಾಡೆY ಮಹಾರಾಜ ಧರ್ಮಶಾಲಾ ದಾದರ್‌ ಇಲ್ಲಿ ಬೆಳಗ್ಗಿನ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Advertisement

ಈ ಸಂದರ್ಭದಲ್ಲಿ ಎನ್‌. ಟಿ. ಕೋಟ್ಯಾನ್‌ ಹಾಗೂ ಲಕ್ಷಿ¾ ಕೋಟ್ಯಾನ್‌ ದಂಪತಿ, ಮಕ್ಕಳಾದ ಶುಚಿನ್‌ ಎನ್‌. ಕೋಟ್ಯಾನ್‌ ಸುದೇಶ್‌ ಎನ್‌, ಕೋಟ್ಯಾನ್‌ ಇವರ ಉಪಸ್ಥಿತಿಯಲ್ಲಿ ಸುಮಾರು 300 ಮಂದಿ ಕ್ಯಾನ್ಸರ್‌ ಪೀಡಿತರಿಗೆ ಬೆಳಗ್ಗಿನ ಉಪಾಹಾರ ಹಂಚಲಾಯಿತು. ಕಾರ್ಯಕ್ರಮದಲ್ಲಿ ಸೇವಾ ಯೋಜನೆಯ ಅಯೋಜಕರಾದ ಲಕ್ಷಿ¾ ಕೋಟ್ಯಾನ್‌ ಹಾಗೂ ಪರಿವಾರ ಸದಸ್ಯರನ್ನು ಶಾಲು ಹೊದೆಸಿ, ಪುಷ್ಪಗುತ್ಛ, ಸ್ಮರಣಿಕೆಯೊಂದಿಗೆ ಶಿವಾಯ ಫೌಂಡೇಶನ್‌ನ ವತಿಯಿಂದ ತಾರಾನಾಥ್‌ ರೈ ಅವರ ನೇತೃತ್ವದಲ್ಲಿ ಸಮ್ಮಾನಿಸಲಾಯಿತು.

ಪ್ರಶಾಂತ್‌ ಶೆಟ್ಟಿ ಪಲಿಮಾರು ಕಾರ್ಯಕ್ರಮ ನಿರ್ವಹಿಸಿದರು. ಹಾಗೂ ನವೀನ್‌ ಪಡು ಇನ್ನಾ ವಂದಿಸಿದರು. ಶಿವಾಯ ಸದಸ್ಯರಾದ ಮಧುಸೂದನ್‌ ಶೆಟ್ಟಿ, ಪ್ರಶಾಂತ್‌ ಪಂಜ,  ಶ್ವೇತಾ ಶೆಟ್ಟಿ ಅವರಾಲು ಕಂಕಣಗುತ್ತು, ಅಶೋಕ್‌ ಶೆಟ್ಟಿ ಮುಟ್ಲುಪಾಡಿ, ರûಾ ಶೆಟ್ಟಿ, ವರ್ಣಿತ್‌ ಶೆಟ್ಟಿ, ವಿನೋದ್‌ ದೇವಾಡಿಗ, ಕಿರಣ್‌ ಜೈನ್‌, ನಾಗೇಶ್‌ ಭೋವಿ, ಸುನಿಲ್‌ ಮೂಲ್ಯ, ದೀಪಾ ದೇವಾಡಿಗ, ಸುಷ್ಮಾ ಪೂಜಾರಿ, ಶಿಲ್ಪಾ ಗೌಡ ಮಾಂಡ್ವಂಕರ್‌ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next