Advertisement

ಶ್ರೀ ಶ್ರೀ ಶ್ರೀ ಶಿವಸುಜ್ನಾನ ತೀರ್ಥ ಸ್ವಾಮೀಜಿ ಮಣಿಪಾಲ ಆಸ್ಪತ್ರೆಗೆ ಭೇಟಿ

09:59 AM Dec 29, 2019 | sudhir |

ಮಣಿಪಾಲ : ಪೇಜಾವರ ಸ್ವಾಮೀಜಿಯವರ ಅನಾರೋಗ್ಯ ನಿಮಿತ್ತ ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ, ಅರೆಮಾದನಹಳ್ಳಿ ಮಠ, ಹಾಸನದ ಶ್ರೀ ಶ್ರೀ ಶ್ರೀ ಶಿವಸುಜ್ನಾನ ತೀರ್ಥ ಮಹಾಸ್ವಾಮೀಜಿಯವರು ಇಂದು ಕೆ.ಎಂ.ಸಿ. ಮಣಿಪಾಲ ಆಸ್ಪತ್ರೆಗೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿಯವರೊಂದಿಗೆ ಚರ್ಚಿಸಿ, ಸ್ವಾಮೀಜಿಯವರ ಯೋಗಕ್ಷೇಮ ವಿಚಾರಿಸಿದರು. ಈ ಸಂದರ್ಭದಲ್ಲಿ ಶ್ರೀ ಮಧು ಆಚಾರ್ಯ, ಅಧ್ಯಕ್ಷರು, ವಿಶ್ವಕರ್ಮ ಒಕ್ಕೂಟ, ಉಡುಪಿ-ದ.ಕ., ಶ್ರೀ ಅಲೆವೂರು ಯೋಗೀಶ್ ಆಚಾರ್ಯ, ನಿಕಟಪೂರ್ವ ಅಧ್ಯಕ್ಷರು, ವಿಶ್ವಕರ್ಮ ಒಕ್ಕೂಟ, ಶ್ರೀ ರವಿಚಂದ್ರ ಆಚಾರ್ಯ, ಅಧ್ಯಕ್ಷರು, ವಿಶ್ವಕರ್ಮ ಯುವ ಸಂಘಟನೆ, ಕೊಕ್ಕರ್ಣೆ, ಮಹೇಶ್ ಆಚಾರ್ಯ, ಕಾರ್ಯದರ್ಶಿ,ವಿಶ್ವಕರ್ಮ ಯುವ ಸಂಘಟನೆ, ಕೊಕ್ಕರ್ಣೆ, ಪ್ರಕಾಶ್ ಆಚಾರ್ಯ, ಕಾಡೂರು ಬೆಳ್ತಾಡಿ ಹಾಗೂ ಮಠದ ಶಿಷ್ಯ ವೃಂದದವರು ಉಪಸ್ಥಿತಿರಿದ್ದರು.

Advertisement

ಫೋಟೋ : ಸತೀಶ್ ಆಚಾರ್

Advertisement

Udayavani is now on Telegram. Click here to join our channel and stay updated with the latest news.

Next