Advertisement

ಕನ್ನಡಕ್ಕಾಗಿ ಪ್ರಾಣಕೊಡಲು ಸಿದ್ಧ: ಶಿವಣ್ಣ 

11:19 AM Dec 20, 2021 | Team Udayavani |

ಬೆಂಗಳೂರು: ಕನ್ನಡ ಭಾಷೆಗಾಗಿ ನಾನು ಪ್ರಾಣಕೊಡಲು ಸಿದ್ಧ. ನಮ್ಮ ಭಾಷೆಗಾಗಿ ನನ್ನ ಪ್ರಾಣ ಹೋದರೂ ನಂಗೆ ಬೇಸರವಿಲ್ಲ ಎಂದು ನಟ ಶಿವರಾಜ್‌ ಕುಮಾರ್‌ ಹೇಳಿದರು.

Advertisement

ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಕನ್ನಡ ಬಾವುಟ ಸುಟ್ಟ ವಿಚಾರದ ಕುರಿತು ಸಿನಿಮಾ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ಶಿವಣ್ಣ, ನಮ್ಮ ಬಾವುಟ ಸುಡುವುದು ಎಷ್ಟು ಸರಿ. ಕರ್ನಾಟಕದಲ್ಲಿ ನಾವು ಎಲ್ಲರಿಗೂ ಬೆಲೆ ಕೊಡುತ್ತೇವೆ. ನಾವು ಯಾವರಾಜ್ಯದಲ್ಲಿ ಇದ್ದೆವೊ ಅಲ್ಲಿನ ಭಾಷೆಗೆ ಗೌರವ ಕೊಡಬೇಕು. ನಾವು ಶಾಂತವಾಗಿದ್ದೇವೆ ಎಂದರೆನಮಗೆ ಏನೂ ಪವರ್‌ ಇಲ್ಲ ಅಂದು ಕೊಳ್ಳಬೇಡಿ. ಮನುಷ್ಯನಿಗೆ ಕೋಪ ಬಂದರೆ ತಡೆದುಕೊಳ್ಳಲು ಆಗಲ್ಲ. ಬೇರೆ ಭಾಷೆಯ ಸಿನಿಮಾಗಳನ್ನು ನೋಡುತ್ತೇವೆ, ಎಂದರೆ ನಾವು ಆ ಭಾಷೆಗೆ ಕೊಡುತ್ತಿರುವ ಮರ್ಯಾದೆ ಅದು. ಅದೇ ರೀತಿ ಬೇರೆ ಭಾಷೆಯವರುಕೂಡ ನಮ್ಮ ಭಾಷೆಗೆ ಮರ್ಯಾದೆ ಕೊಡಬೇಕು ಎಂದು ಖಡಕ್ಕಾಗಿ ಹೇಳಿದರು.

ರಾಜ್ಯಸರ್ಕಾರ ಕನ್ನಡ ಧ್ವಜ ಸುಟ್ಟ ಬಗ್ಗೆ ಕ್ರಮವಹಿಸಬೇಕು. ನಮ್ಮ ನೆಲ ಜಲದ ವಿಚಾರದಲ್ಲಿರಾಜಕೀಯ, ಮತ ಬಿಟ್ಟು ಎಲ್ಲರೂ ಒಂದಾಗಬೇಕು. ರಾಜ್ಯದ, ಭಾಷೆಯ ವಿಚಾರ ಬಂದಾಗ ಇಡೀ ಚಿತ್ರರಂಗ ಹೋರಾಟ ಮಾಡಲು ಸಿದ್ಧ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next