Advertisement

ಸಿನಿ ಕಾರ್ಮಿಕರಿಗೆ ಶಿವಣ್ಣ ನೆರವು

01:21 PM Jun 23, 2021 | Team Udayavani |

ಬೆಂಗಳೂರು: ಲಾಕ್‌ ಡೌನ್‌ ನಿಂದಾಗಿ ಚಿತ್ರೀಕರಣವಿಲ್ಲದೇ ಸಿನಿಮಾ ಕಾರ್ಮಿಕರು ಸಾಕಷ್ಟು ತೊಂದರೆ ಒಳಪಟ್ಟಿದ್ದಾರೆ. ಈಗಾಗಲೇ ಇವರ ಸಹಾಯಕ್ಕೆ ಅನೇಕರು ಧಾವಿಸಿದ್ದಾರೆ. ನಟರಾದ ಯಶ್‌, ಪುನೀತ್‌, ನಿರ್ಮಾಪಕ ವಿಜಯ್‌ ಕಿರಗಂದೂರು… ಹೀಗೆ ಅನೇಕರು ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.

Advertisement

ಈಗ ನಟ ಶಿವರಾಜ್‌ಕುಮಾರ್‌ ಸಿನಿಮಾ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ. ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂಪಾಯಿ ನೀಡಿದ್ದಾರೆ. ಶಿವಣ್ಣ ನೀಡಿರುವ ಚೆಕ್‌ ಅನ್ನು ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ಒಕ್ಕೂಟಕ್ಕೆ ಹಸ್ತಾಂತರಿಸಿದ್ದಾರೆ. ಈ ವೇಳೆ ಒಕ್ಕೂಟ ಅಧ್ಯಕ್ಷ ಸಾ.ರಾ.ಗೋವಿಂದು, ಕಾರ್ಯದರ್ಶಿ ರವೀಂದ್ರನಾಥ್‌ ಹಾಜರಿದ್ದರು.

ಸದ್ಯ ಶಿವರಾಜ್‌ಕುಮಾರ್‌ ಅವರ “ಭಜರಂಗಿ-2′ ಬಿಡುಗಡೆಯ ಹಂತಕ್ಕೆ ಬಂದಿದೆ. ಇದರ ಜೊತೆಗೆ ವಿಜಯ್‌ ಮಿಲ್ಟನ್‌ ನಿರ್ದೇಶನದ ಹೊಸ ಚಿತ್ರಕೊನೆಯ ಹಂತದ ಚಿತ್ರೀಕರಣ ತಲುಪಿದೆ.

ಇದನ್ನೂ ಓದಿ: ಈಗ ಡೆಲ್ಟಾ ಪ್ಲಸ್‌ ಅಬ್ಬರ : ಮಹಾರಾಷ್ಟ್ರ, ಕೇರಳ, ಮ.ಪ್ರದೇಶದಲ್ಲಿ ಹೊಸ ರೂಪಾಂತರಿ ಹಾವಳಿ

Advertisement

Udayavani is now on Telegram. Click here to join our channel and stay updated with the latest news.

Next