Advertisement

ಶಿವಪುರ ಗ್ರಾ.ಪಂ. ಕಾರ್ಯದರ್ಶಿ ನೇಣು ಬಿಗಿದು ಆತ್ಮಹತ್ಯೆ ಶರಣು : ಕಾರಣ ನಿಗೂಢ

09:49 PM Apr 19, 2022 | Team Udayavani |

ಗಂಗಾವತಿ: ತಾಲೂಕಿನ ಮುಕ್ಕುಂಪಿ ಗ್ರಾಮದ ನಿವಾಸಿ ಹಾಗೂ ಕೊಪ್ಪಳ ತಾಲ್ಲೂಕಿನ ಶಿವಪುರ ಗ್ರಾ.ಪಂ ಕಾರ್ಯದರ್ಶಿ ಮನೋಜ್ ಕುಮಾರ್ (27) ಇವರು ಮುಕ್ಕುಂಪಿ ಗ್ರಾಮದ ತೋಟದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ .

Advertisement

ಸೋಮವಾರ ಸೂಪರ್ ಗ್ರಾ.ಪಂನಲ್ಲಿ ಕೆಲಸ ನಿರ್ವಹಿಸಿ ಸಂಜೆ ಸ್ವಂತ ಗ್ರಾಮವಾದ ಮುಕ್ಕುಂಪಿ ಗೆ ಆಗಮಿಸಿ ಮನೆಯಿಂದ ಹೊಲಕ್ಕೆ ಹೋಗಿ ಮರಳಿ ಬಾರದೇ ಇದ್ದ ಕಾರಣ, ಮನೆಯವರು ತೋಟದ ಮನೆಯಲ್ಲಿ ಹೋಗಿ ನೋಡಿದಾಗ ಮನೋಜ್ ಕುಮಾರ್ ನೇಣು ಹಾಕಿಕೊಂಡ ದೃಶ್ಯ ಕಂಡುಬಂದಿದೆ.

ತನಿಖೆ ನಡೆಸಿ ಈ ಆತ್ಮಹತ್ಯೆಗೆ ಕಾರಣ ಏನೆಂಬುದನ್ನು ಪತ್ತೆ ಮಾಡುವಂತೆ ಕುಟುಂಬವರ್ಗದವರು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ .

ಇದನ್ನೂ ಓದಿ : ಬಂಡೀಪುರ ಸಂರಕ್ಷಿತ ಪ್ರದೇಶದಲ್ಲಿ ಅವಳಿ ಮರಿಗಳಿಗೆ ಜನ್ಮ ನೀಡಿದ ಆನೆ!

Advertisement

Udayavani is now on Telegram. Click here to join our channel and stay updated with the latest news.

Next