Advertisement

Shivapadi: ಆ. 20:ಶಿವಪಾಡಿ ದೇಗುಲದಲ್ಲಿ ಸಾಮೂಹಿಕ ಶಿವಪಂಚಾಕ್ಷರಿ ಮಂತ್ರ ಪುರಶ್ಚರಣ, ಹೋಮ

03:40 PM Aug 17, 2023 | Team Udayavani |

ಮಣಿಪಾಲ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ಆ. 20ರಂದು ಸಾಮೂಹಿಕ ಶಿವಪಂಚಾಕ್ಷರಿ ಮಂತ್ರ ಪುರಶ್ಚರಣ ಹಾಗೂ ಶಿವಪಂಚಾಕ್ಷರಿ ಮಹಾಮಂತ್ರ ಹೋಮವು ವೇ|ಮೂ| ಹೆರ್ಗ ರಾಘವೇಂದ್ರ ತಂತ್ರಿ ಅವರ ನೇತೃತ್ವದಲ್ಲಿ ನೆರವೇರಲಿದೆ.

Advertisement

ಇದನ್ನೂ ಓದಿ:Chandrayaan-3: ಮಹತ್ವದ ಮೈಲಿಗಲ್ಲು…ಇನ್ನೊಂದೇ ಹೆಜ್ಜೆ-ನೌಕೆಯಿಂದ ಬೇರ್ಪಟ್ಟ ಲ್ಯಾಂಡರ್

ಬೆಳಗ್ಗೆ 8.30ರಿಂದ ಭಕ್ತರಿಂದ “ಓಂ ನಮಃ ಶಿವಾಯ ಓಂ’ ಸಂಕಲ್ಪ, ಸಾಮೂಹಿಕ ಶಿವಪಂಚಾಕ್ಷರಿ ಮಂತ್ರ ಪುರಶ್ಚರಣ, ಶ್ರೀ ಉಮಾಮಹೇಶ್ವರ ದೇವರಿಗೆ ಬಿಲ್ವಾರ್ಚನೆ, ಶಿವ ಪಂಚಾಕ್ಷರಿ ಮಹಾ ಮಂತ್ರ ಹೋಮ, ಮಧ್ಯಾಹ್ನ 12ರಿಂದ ಪೂರ್ಣಾ ಹುತಿ, ಶ್ರೀ ದೇವರಿಗೆ ಕಲಶಾಭಿಷೇಕ, ಪ್ರಸನ್ನ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ.

ಭಕ್ತರು ವೈಯಕ್ತಿಕವಾಗಿ, ದಂಪತಿ ಹಾಗೂ ಕುಟುಂಬ ಸಮೇತ ಮುಕ್ತವಾಗಿ ಭಾಗವಹಿಸಲು ಅವಕಾಶವಿದೆ ಎಂದು ದೇಗುಲದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next