Advertisement

ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮ ಆರೋಗ್ಯ ಮುಖ್ಯ ಎಂದು ಶಿವಣ್ಣ ಹೇಳಿದ್ಯಾಕೆ?

08:58 AM Jul 04, 2020 | Lakshmi GovindaRaj |

ಜುಲೈ 12 ರಂದು  ಹ್ಯಾಟ್ರಿಕ್‌ ಹಿರೋ ಶಿವರಾಜ್‌ಕುಮಾರ್ 58ನೇ ಹುಟ್ಟುಹಬ್ಬವಿದ್ದು, ಅವರ ಅಭಿಮಾನಿಗಳ ಪಾಲಿಗೆ ಅದು ದೊಡ್ಡಹಬ್ಬ. ಅದಕ್ಕಾಗಿ ಅಭಿಮಾನಿಗಳು ಸಹ ತಯಾರಿ ನಡೆಸುತ್ತಿದ್ದರು. ಈ ನಡುವೆ ಶಿವಣ್ಣ ಈ ಬಾರಿ ನಾನು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

Advertisement

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಟ್ವೀಟರ್‌ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು, “ನನ್ನ ಹುಟ್ಟುಹಬ್ಬಕ್ಕಿಂತ ನಿಮ್ಮೆಲ್ಲರ ಆರೋಗ್ಯ ನನಗೆ ಮುಖ್ಯ. ಬರ್ತ್ ಡೇ ದಿನ ನಾನು ಮನೆಯಲ್ಲಿ ಇರೋದಿಲ್ಲ. ನಿಮ್ಗೆಲ್ಲ ಬೇಜಾರಾಗುತ್ತೆ ಅಂತ ಗೊತ್ತು. ಅದಕ್ಕಿಂತ ಹೆಚ್ಚು ಬೇಜಾರು ನನಗೆ ಆಗುತ್ತೆ. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಆದರೆ, ಬರ್ತ್ ಡೇ ಆಚರಿಸಿದ್ದಲ್ಲಿ ಅದನ್ನ ಪಾಲಿಸೋದು ಕಷ್ಟ. ಕೋವಿಡ್‌ 19 ಕಳೆದ ಮೇಲೆ ಎಲ್ಲರೂ ಒಂದು ಕಡೆ ಮೀಟ್ ಮಾಡೋಣ. ಆದಷ್ಟು ಬೇಗ ಕೋವಿಡ್‌ 19ನಿಂದ ಹೊರಬರೋಣ. ಭಯಪಡಬೇಡಿ, ಧೈರ್ಯವಾಗಿರಿ. ನಿಯಮಗಳನ್ನ ಪಾಲಿಸೋಣ’ವೆಂದು ಹೇಳಿದ್ದಾರೆ.

ಇನ್ನು ಶಿವಣ್ಣನ ಹುಟ್ಟುಹಬ್ಬಕ್ಕೆ ಭಜರಂಗಿ 2 ಚಿತ್ರತಂಡ, ಇಷ್ಟು ದಿನ ಕೋವಿಡ್‌ ಮಹಾಮಾರಿಯಿಂದ ಏನೂ ಅಪ್ಡೆಟ್‌ ಕೊಡಲಿಲ್ಲ. ಭಜರಂಗಿ ಅಂದ್ರೇನೆ ದುಷ್ಟ ಶಕ್ತಿಗಳ  ಹುಟ್ಟಡಗಿಸೋ ಹೆಸರು. ಕೆಟ್ಟದ್ದನ್ನೆಲ್ಲಾ ಸಂಹಾರ ಮಾಡಿ ಹೊಸ ಶಕ್ತಿಯೊಂದಿಗೆ ಬರುತ್ತಿದ್ದೇವೆ. ಫಸ್ಟ್‌ ಲುಕ್‌ ಎಲ್ಲಾ ಆಯ್ತು.ಇವಾಗ ಹೊಸ ಸರ್‌‌ಪ್ರೈಸ್‌… ಎಲ್ಲಾ ಶಿವಣ್ಣನ ಅಭಿಮಾನಿಗಳಿಗೆ ಅವರ ಹುಟ್ಟುಹಬ್ಬದಂದು… ಎಂದು ಟ್ವೀಟ್ ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next