Advertisement

Vijayapura; ಸಹಕಾರಿ ವ್ಯವಸ್ಥೆಗೆ ಸೌಹಾರ್ದ ಸಮಸ್ಯೆ: ಶಿವಾನಂದ ಪಾಟೀಲ

02:18 PM Aug 31, 2024 | keerthan |

ವಿಜಯಪುರ: ಸಹಕಾರಿ ಆರ್ಥಿಕ ವ್ಯವಸ್ಥೆಯಲ್ಲಿ ಸಹಕಾರಿಗಳ ಸೌಹಾರ್ದ ಬ್ಯಾಂಕ್‍ಗಳ ಮೇಲೆ ನಿಯಂತ್ರಣ ಇಲ್ಲದಿರುವುದು ಸಹಕಾರಿ ವ್ಯವಸ್ಥೆಗೆ ಮಾರಕವಾಗಲಿದೆ. ಸಹಕಾರಿ ನೀತಿಗಳು ಇದೇ ರೀತಿ ಮುಂದುವರೆದರೆ ಸಹಕಾರಿ ರಂಗ ಉಳಿಯುವುದೇ ಅನುಮಾನ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಜವಳಿ ಸಚಿವ ಶಿವಾನಂದ ಪಾಟೀಲ ಆತಂಕ ವ್ಯಕ್ತಪಡಿಸಿದರು.

Advertisement

ಶನಿವಾರ ನಗರದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಹಕಾರಿ ಆರ್ಥಿಕ ವ್ಯವಸ್ಥೆಯ ಮೇಲೆ ಆರ್‌ ಬಿಐ, ನಬಾರ್ಡ್ ಹಾಗೂ ಕೇಂದ್ರ-ರಾಜ್ಯ ಸರ್ಕಾರಗಳು ನಿಯಮಗಳ ನಿರ್ಬಂಧ ಹೇರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಸಹಕಾರಿ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಆರಂಭಿಸಿದ ಮೇಲೂ ಸಚಿವ ಅಮಿತ್ ಅವರಿಂದ ನಮ್ಮ ಸಹಕಾರಿಗಳಿಗೆ ಏನೂ ಲಾಭವಾಗಲಿಲ್ಲ. ಕೇಂದ್ರ-ರಾಜ್ಯ ಸರ್ಕಾರಗಳೂ ಸಹಕಾರಿ ವ್ಯವಸ್ಥೆಯ ನೀತಿಗಳು ಸಹಕಾರಿಗೆ ಆರ್ಥಿಕತೆಗೆ ಸಹಕಾರಿ ಆಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ ಸಹಕಾರಿ ರಂಗವೇ ಉಳಿಯುವುದೇ ಅನುಮಾನ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next