Advertisement

ಸಮಾಜಕ್ಕೆ ಬ್ರಾಹ್ಮಣರ ಕೊಡುಗೆ ಅಪಾರ

09:34 PM Jan 01, 2022 | Adarsha |

ಶಿವಮೊಗ್ಗ: ತಾಲೂಕು ಬ್ರಾಹ್ಮಣ ಸೇವಾಸಂಘದ ವತಿಯಿಂದ 2022 ಸಾಲಿನ ನೂತನಕ್ಯಾಲೆಂಡರ್‌ ಉದ್ಘಾಟನಾ ಸಮಾರಂಭ ಹಾಗೂವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಯಾದಡಿ.ಎಸ್‌. ಅರುಣ್‌ ಅವರನ್ನು ಆತ್ಮೀಯವಾಗಿಸನ್ಮಾನಿಸಲಾಯಿತು.

Advertisement

ಸನ್ಮಾನ ಸ್ವೀಕರಿಸಿ ಮಾತನಾಡಿದ ಅರುಣ್‌,ಅವರು ಬ್ರಾಹ್ಮಣ ಸಮಾಜದಲ್ಲಿ ಉತ್ತಮಚಿಂತಕರು, ಹಿರಿಯರು ಸಮಾಜ ಕಟ್ಟುವಲ್ಲಿಶಕ್ತಿಯನ್ನು ನೀಡಿದ್ದಾರೆ. ವಿಧಾನ ಪರಿಷತ್‌ ಚಿಂತಕರಚಾವಡಿ ಹಿರಿಯರ ಸದನ ಎಂಬ ಮಾತಿದೆ.ತಾಲೂಕು ಬ್ರಾಹ್ಮಣ ಸೇವಾ ಸಂಘವು ಅಂತಹಚಿಂತಕರ ಚಾವಡಿ ಎಂದರು. 1988ರಿಂದ ವಿಧಾನಪರಿಷತ್‌ ಸದಸ್ಯರಾಗಿ ನಮ್ಮ ತಂದೆ ಕಾರ್ಯನಿರ್ವಹಿಸುತ್ತಾ ಬಂದಿದ್ದರು. ಆ ಸಂದರ್ಭಗಳಲ್ಲಿನಾನು ಚರ್ಚೆಯಲ್ಲಿ ಭಾಗವಹಿಸುತ್ತಿದ್ದೆ.ಹಲವಾರು ಕ್ಷೇತ್ರಗಳಿಂದ ಆಯ್ಕೆಯಾಗಿ ಪರಿಷತ್ತಿಗೆಬಂದು ವಿಚಾರಗಳನ್ನು ಮಂಡನೆ ಮಾಡುತ್ತಿದ್ದರು.ಆ ವಿಚಾರಗಳಿಂದ ಮುಂದಿನ ದಿನ ನಾನುಸದನದಲ್ಲಿ ಸದಸ್ಯನಾಗಬೇಕು ಎಂಬ ಹಂಬಲಹೊಂದಿದ್ದರಿಂದ ಪಕ್ಷದ ಸಹಕಾರ ಹಾಗೂಹಿರಿಯರ ಆಶೀರ್ವಾದದಿಂದ ಈಗ ಅದುಸಾಧ್ಯವಾಗಿದೆ ಎಂದರು.

ನಂತರ ಮಾತನಾಡಿದ ಮಾಜಿ ಶಾಸಕಕೆ.ಬಿ ಪ್ರಸನ್ನ ಕುಮಾರ್‌, ಬ್ರಾಹ್ಮಣ ಸಮಾಜಎಲ್ಲರ ಒಳಿತನ್ನು ಸರ್ವೇ ಜನ ಸುಖೀನೋಭವಂತು ಎಂದು ಹೇಳುವ ಸಮಾಜ. ಅಂತಹಸಮಾಜದಿಂದ ಸಾಮಾಜಿಕ ಕಾರ್ಯಕ್ರಮಗಳನ್ನುಮಾಡುತ್ತಾ ಬ್ರಾಹ್ಮಣ ಸಮಾಜ ಬಂದಿದೆ. ಆನಿಟ್ಟಿನಲ್ಲಿ 2022ರ ನೂತನ ಕ್ಯಾಲೆಂಡರನ್ನು ಮನೆ-ಮನೆಗೆ ನೀಡುತ್ತ ತಾಲೂಕು ಬ್ರಾಹ್ಮಣ ಸಂಘಬಂದಿದೆ ಎಂದರು.

ನಂತರ ಮಾತನಾಡಿದ ತಾಲೂಕು ಬ್ರಾಹ್ಮಣಸೇವಾ ಸಂಘದ ಅಧ್ಯಕ್ಷ ವೆಂಕಟೇಶ್‌ ಅವರು,ನಿಕಟಪೂರ್ವ ಅಧ್ಯಕ್ಷರ ಪರಿಕಲ್ಪನೆಯಂತೆ ಈವರ್ಷವೂ ಕೂಡ ನಮ್ಮ ಸಂಘದಿಂದ ಕ್ಯಾಲೆಂಡರ್‌ಬಿಡುಗಡೆ ಆಗಿದೆ ಡಿಎಸ್‌ ಅರುಣ್‌ ಅವರಿಗೆಮುಂದಿನ ದಿನಗಳಲ್ಲಿ ಪಕ್ಷ ಇನ್ನಷ್ಟು ಅವಕಾಶಕಲ್ಪಿಸಲಿ ಎಂದರು.ಇದೇ ಸಂದರ್ಭದಲ್ಲಿ ಅಟಲ ಶ್ರೀ ಪ್ರಶಸ್ತಿಪಡೆದ ಸುರೇಖಾ ಮುರಳಿಧರ್‌ ಅವರನ್ನುಸನ್ಮಾನಿಸಲಾಯಿತು ಜಿಲ್ಲಾ ಬ್ರಾಹ್ಮಣ ಸಂಘದಅಧ್ಯಕ್ಷರಾದ ನಟರಾಜ್‌ ಭಾಗವತ್‌, ನಗರಸಭೆಯಮಾಜಿ ಅಧ್ಯಕ್ಷರಾದ ಎಂ. ಶಂಕರ್‌ , ಡಾ|ರವಿಕಿರಣ ,ಸುಂದರ ರಾಜ್‌, ಗುರುರಾಜ್‌ ಹಂಡೆ,ಮಾಧವಾಚಾರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next