Advertisement

ಶಾರದಾ ಪೀಠಕ್ಕೆ ಪ್ರವಾಸಿಗರ ದಂಡು

03:41 PM Dec 26, 2021 | Adarsha |

ಶೃಂಗೇರಿ: ಒಮಿಕ್ರಾನ್‌ ಆತಂಕದನಡುವೆಯೂ ಕ್ರಿಸ್‌ಮಸ್‌ ರಜೆ ಹಾಗೂವರ್ಷಾಂತ್ಯದ ಹಿನ್ನೆಲೆಯಲ್ಲಿ ಶ್ರೀಶಾರದಾ ಪೀಠಕ್ಕೆ ಪ್ರವಾಸಿಗರ ದಂಡುಹರಿದು ಬಂದಿದೆ.ಪಟ್ಟಣದ ವಾಹನ ನಿಲುಗಡೆಸ್ಥಳವಾದ ಗಾಂಧಿ ಮೈದಾನದಲ್ಲಿಪ್ರವಾಸಿ ವಾಹನದ ಸಾಲು ಹಾಗೂಶ್ರೀಮಠದ ಎದುರು ಭಕ್ತಾದಿಗಳಸಾಲು ಕಂಡು ಬಂದಿದೆ.

Advertisement

ಕೊರೊನಾನಂತರ ಪ್ರವಾಸೋದ್ಯಮ ಸಂಪೂರ್ಣನೆಲಕಚ್ಚಿದ್ದು, ಇದೀಗ ಪ್ರವಾಸಿಗರುಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು,ಪ್ರವಾಸೋದ್ಯಮದಲ್ಲಿ ಚೇತರಿಕೆ ಕಂಡುಬಂದಿದೆ. ಗಾಂಧಿ ಮೈದಾನದಲ್ಲಿವಾಹನ ನಿಲುಗಡೆ ಅಲ್ಲದೇ ಪಟ್ಟಣದಎಲ್ಲಾ ರಸ್ತೆಯಲ್ಲೂ ಪ್ರವಾಸಿಗರ ವಾಹನನಿಲುಗಡೆಯಾಗಿದೆ.ಪಟ್ಟಣದ ವಸತಿ ಗೃಹಗಳು, ಹೋಂಸ್ಟೇಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು,ಹೋಂ ಸ್ಟೇಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ.

ಶ್ರೀಮಠದಲ್ಲಿಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಇದ್ದು, ಸಾವಿರಾರು ಜನರು ಊಟಕ್ಕೆಆಗಮಿಸುತ್ತಿದ್ದಾರೆ. ಭಕ್ತರಿಗೆ ಎರಡು ಲಸಿಕೆಪ್ರಮಾಣ ಪತ್ರ ಕಡ್ಡಾಯಗೊಳಿಸಲಾಗಿದೆ.ಜಗದ್ಗುರುಗಳು ವಾಸ್ತವ್ಯ ಇರುವಗುರುಭವನಕ್ಕೂ ಭಕ್ತಾದಿಗಳು ಹೆಚ್ಚಿನಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.ಗುರುದರ್ಶನ ಬೆಳಗ್ಗೆ 11 ರಿಂದಮಧ್ಯಾಹ್ನದವರೆಗೆ ಮಾತ್ರಇದೆ.

ಶ್ರೀಮಠದ ಎದುರಿನಶ್ರೀ ಚಂದ್ರಶೇಖರ ಭಾರತೀಸಭಾಂಗಣದಲ್ಲಿ ಮಕ್ಕಳ ಅಕ್ಷರಭ್ಯಾಸವೂನಡೆಯುತ್ತಿದ್ದು,ನೂರಾರು ಮಕ್ಕಳಿಗೆಅಕ್ಷರಾಭ್ಯಾಸ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next