Advertisement

ಆಯುಷ್‌ ವಿವಿ ಸ್ಥಾಪನೆಗೆ ಸಂಸದರ ಅಭಿನಂದನೆ

06:21 PM Dec 23, 2021 | Adarsha |

ಶಿವಮೊಗ್ಗ: ಜಿಲ್ಲೆಯ ಜನರ ಬಹುದಿನಗಳ ಕನಸಾಗಿದ್ದಆಯುರ್ವೇದ, ಯುನಾನಿ, ಯೋಗ, ಸಿದ್ದ,ಹೋಮಿಯೋಪತಿಯನ್ನೊಳಗೊಂಡ ಆಯುಷ್‌ವಿಶ್ವವಿದ್ಯಾಲಯ ಶಿವಮೊಗ್ಗದ ಸೋಗಾನೆಗ್ರಾಮದಲ್ಲಿ ಸುಮಾರು 100 ಎಕರೆಪ್ರದೇಶದಲ್ಲಿ ಸ್ಥಾಪನೆಯಾಗುತ್ತಿದ್ದು, ಆರಂಭಿಕ ವೆಚ್ಚವಾಗಿ ಸರ್ಕಾರ ರೂ. 20 ಕೋಟಿಅನುದಾನ ಬಿಡುಗಡೆ ಮಾಡಿರುವುದನ್ನುಸ್ವಾಗತಿಸಿರುವ ಸಂಸದ ಬಿ.ವೈ.ರಾಘವೇಂದ್ರಅವರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಹಾಗೂ ಸಚಿವ ಸಂಪುಟದ ಸಚಿವರಿಗೆ, ರಾಜ್ಯ ಮಟ್ಟದ ಹಿರಿಯಅಧಿ ಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

Advertisement

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಅವರು, ಶಿವಮೊಗ್ಗ ಜಿಲ್ಲೆಗೆ ಸರ್ಕಾರಿ ಆಯುರ್ವೇದವೈದ್ಯಕೀಯ ಮಹಾವಿದ್ಯಾಲಯ, ಕೃಷಿ ಮತ್ತು ತೋಟಗಾರಿಕೆವಿಶ್ವವಿದ್ಯಾಲಯ, ಪಶು ವೈದ್ಯಕೀಯ ಮಹಾವಿದ್ಯಾಲಯ,ವಿಮಾನ ನಿಲ್ದಾಣ, ಅತ್ಯಾಧುನಿಕ ಬಸ್‌ ನಿಲ್ದಾಣ, ವೈದ್ಯಕೀಯವಿಜ್ಞಾನಗಳ ಮಹಾವಿದ್ಯಾಲಯ, ಹಲವಾರು ರಸ್ತೆ, ಸೇತುವೆ, ರೈಲ್ವೆಸಂಪರ್ಕಗಳ ಜೊತೆಗೆ ಆಯುಷ್‌ ವಿಶ್ವವಿದ್ಯಾಲಯ ಮತ್ತೂಂದುಮೈಲಿಗಲ್ಲಾಗಿ ಉಳಿಯಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next