Advertisement

ಪ್ರಧಾನಿ ಆಗಮನಕ್ಕಾಗಿ ಸಿದ್ಧತೆ: ಈಶ್ವರಪ್ಪ

08:43 PM Mar 16, 2022 | Adarsha |

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರುಹೊಳಲೂರು ಗ್ರಾ.ಪಂ.ಗೆ ಏ.24ರಂದು ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು. ಮೋದಿ ಆಗಮನದ ಹಿನ್ನೆಲೆಯಲ್ಲಿ ಹೊಳಲೂರಿಗೆಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

Advertisement

ಪ್ರಧಾನಿ ಮೋದಿಯವರು ಇಡೀದೇಶದ ಗ್ರಾಮೀಣ ಇಲಾಖೆಗಳ ಪರಿಶೀಲನೆಮಾಡುವ ಹಿನ್ನೆಲೆಯಲ್ಲಿ ಹೊಳಲೂರಿಗೆ ಭೇಟಿ ನೀಡಲಿದ್ದಾರೆ. ಅವರ ಆಗಮನ ಹಿನ್ನೆಲೆಯಲ್ಲಿಹೊಳಲೂರಿನಲ್ಲಿರುವ ಸುಮಾರು 15 ಎಕರೆಜಾಗದಲ್ಲಿ 5 ಎಕರೆ ಜಾಗವನ್ನು ಹೆಲಿಪ್ಯಾಡ್‌ನಿರ್ಮಿಸಲು ತೀರ್ಮಾನಿಸಲಾಗಿದೆ.

ಉಳಿದ10 ಎಕರೆ ಜಾಗವನ್ನು ಕಾರ್ಯಕ್ರಮಕ್ಕಾಗಿನಿಗದಿಗೊಳಿಸಲಾಗಿದೆ ಎಂದರು.ಮೋದಿ ಅವರು ಮಧ್ಯಾಹ್ನ 12 ಗಂಟೆಗೆಆಗಮಿಸಲಿದ್ದು, ಇಲಾಖೆಗಳ ಪರಿಶೀಲನೆ ನಡೆಸಿಗ್ರಾಮಸ್ಥರೊಂದಿಗೆ ಸಂವಾದ ನಡೆಸಲಿದ್ದಾರೆ.ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕರನ್ನುದ್ದೇಶಿಸಿಭಾಷಣ ಮಾಡಲಿದ್ದಾರೆ. ಅದಕ್ಕಾಗಿ ಈಗಿನಿಂದಲೇಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next